ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಜ್ಯೋತಿಯ ಕೆಳಗೊಂದು ಅಂಧಕಾರ
ಉರಿವ ಹಣತೆಗೂ ಇದೆ ಮಮಕಾರ
ತಾನುಯುತಲಿ ಬೆಳಕನೀವ ಸಂಸ್ಕಾರ
ಜಗದ ನೋವ ಕಳೆಯುವ ಆವಿಷ್ಕಾರ

ಅರಿತು ಮರೆತಂತೆ ನಟಿಸೋ ಮನುಜ
ಬದುಕಿನ ಸೌಂದರ್ಯ ತಿಳಿ ನೀ ಸಹಜ
ದೂಡು ತನ್ನೊಳಗೆ ತಾನುರಿವಂತ ಸಜ
ಕ್ರಮಿಸಿಬಿಡು ಬಾಳ ಹಾದಿ ಕಾಣು ನಿಜ

ಸಹಸ್ರ ಬಣ್ಣ,ವೇಷ,ಶೈಲಿಗಳಿಹ ಲೋಕ
ಜನ್ಮದಲಿ ಸಾಧಿಸಲಾರದ ಬಹುನಾಕ
ಕಲಿತು, ಕಲೆಯೆ ಲಾಲಿತ್ಯ ಬೇಕು ಮನಕ
ಅಳಿಯದಂತೆ ಉಳಿಯಲಿ ಇಹ ಪರಕ

ಸಹವರ್ತಿಗಳ ಸಂಘವೇ ಆoಬೋಣ
ಅನುಬಂಧದ ಸವಿಯಿರಲಿ ಕಣಕಣ
ನಮ್ಮೊಳಗೊಂದು ಹಣತೆ ಹಚ್ಚೋಣ
 ಅಸಂಖ್ಯ ಅನರ್ಥಗಳ ತ್ಯಜಿಸೋಣ.

ಗುರುವೆಂಬ ಗುರಿಕಾರ ಎಲ್ಲರೆದೆಯಲಿ
ಪಥಕೆ ಹೂಚೆಲ್ಲೋ ಹರಿಕಾರನಿರುವಲಿ
ಶಿಕ್ಷಣದಿ ಜ್ಞಾನವ ವರ್ಧಿಸುವ ನೇಕಾರ
ಬದುಕೆಲ್ಲ ಸ್ಮರಿಸೋಣವೆಲ್ಲ ಸಜ್ಜನರ

—————————–

About The Author

5 thoughts on “ಮಾಲಾ ಚೆಲುವನಹಳ್ಳಿ ಕವಿತೆ”ಹಣತೆಹಚ್ಚೋಣ””

  1. ದೀಪಾವಳಿ ಹಬ್ಬದ ಕವಿತೆ ಅತ್ಯುತ್ತಮವಾದ ಕವಿತೆ ಮಾಲ ಮೇಡಂ ಅಭಿನಂದನೆಗಳು

  2. ಅದ್ಭುತ ಪದ ಜೋಡಣೆ
    ಮೊದಲ ಚರಣದ ಮೂರನೇ ಸಾಲಿನಲ್ಲಿ ತಾನುರಿಯುತಲಿ ಎಂದಾಗಬೇಕೇನೋ
    ~
    ಸಂಪಿಗೆ ವಾಸು, ಬಳ್ಳಾರಿ

Leave a Reply

You cannot copy content of this page

Scroll to Top