ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇಂದು ರಾಧಾಷ್ಟಮಿಯಂತ

ಆಗಾಗ ನೆನಪಾಗಿ ಕಾಡುವಳು
ಈ ಕೃಷ್ಣನ ಮನದರಸಿ ರಾಧೇ
ಯಾವುದೋ ಕವನದ ಸಾಲಿನಂತೆ
ಇನ್ಯಾವುದೋ ರಾಗದ ಹೊನಲಿನಂತೆ

ಮುಗುಳು ನಗೆಯ ಮುರಾರಿ
ಗೋಪಿಕೆಯರ ಮನವ ಕದ್ದ ಚೋರ
ತುಂಟಾಟದಿ ಮಾತೆಯರ ಗೋಳಾಡಿಸಿದ ಗೋಪಿ
ಹೀಗಿದ್ದರು ಮೋಹಿಸಿದಳು
ಮುರಳಿಧರನ

ಏನೆಲ್ಲ ಸಹಿಸಿದಳು
ಜನರ ಕೊಂಕು ನುಡಿ
ಬಿರು ನೋಟುಗಳ ದಾಟಿ
ಅವನ ಹೃದಯ ಮೀಟಿದಳು
ಮಾಧವನ ಮಾದಕತೆಗೆ ಮಾರುಹೋದಳೇ

ಸುಳಿವೆ ಇರದಾದಾಗ
ಇಹವ ಮರೆತು ಕುಳಿತಳು
ಬೃಂದಾವನದ ಬಳಿ ಬರುವನೋ
ಬಾರನೋ ಬರಲಿ
ಮಾತನಾಡಿಸೆನೋ ಎನ್ನುತ

ತರಗೆಲೆಯ ಸದ್ದಿಗೆ ತಿರುಗುವಳು
ಹೋ ಬಂದ ಮನದನ್ನ ಮದನ
ಗಾಳಿಯೇ ಹೊತ್ತೋಯ್ಯಿ ಮುಟ್ಟಿಸು
ನನ್ನ ಮಧುಸೂದನನಿಗೆ ಸಂದೇಶ
ತನ್ನ ತಾನು ಪ್ರೀತಿಸುವುದಕ್ಕು ಅತಿಯಾಗಿ ಪ್ರೀತಿಸಿದ ರಾಧೇಗೆ
ದಕ್ಕಿದ್ದು ಭಾವಪಟದಿ ಚಿತ್ರವಾಗಿ
ಹೆಸರಿಗೆ ಜೊತೆಯಾಗಿ ಆದರೆ

ಕಂಡುಂಡ ನೋವೆಷ್ಟು
ಅನುಭವಿಸಿದ ಅವಮಾನಗಳು
ಜಗದ ಗೊಡವೆ ಇರದೆ ಜೀವಿಸಿದಳೇ
ಜಗದೋದ್ಧಾರನ ಹೃದಯದರಸಿ
ರಾಧೇ..


About The Author

1 thought on “ʼಇಂದು ರಾಧಾಷ್ಟಮಿಯಂತೆ…!ʼಶಾರದಜೈರಾಂ.”

Leave a Reply

You cannot copy content of this page

Scroll to Top