ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುಗಿಲು ಹರಿದು ಬಿದ್ದಿದೆ
ನೋಡಿದೆಡೆಯೆಲ್ಲಕಡೆ
ಮೇಘ ಸ್ಫೋಟ ಆಗುತ್ತಿದೆ
ಪಡೆದಳುಗಂಗೆ ಬಿಡುಗಡೆ

ಗಂಗೆ ತುಂಗೆ ಕೃಷ್ಣಾ ಕಾವೇರಿ
ಮಾತಾಡಿಕೊಂಡಿಹರು
ಸಿಂಧೂ ಸರಸ್ವತಿ ಮಂದಾಕಿನಿ
ಕೈಜೋಡಿಸಿ ಒಂದಾಗಿಹರು

ಜನರಿಗೆ ತಕ್ಕ ಪಾಠ ಕಲಿಸಲು
ಪಾಪ ಕೃತ್ಯ ತಡೆಯಲು
ರೌದ್ರ ರೂಪ ಧರಿಸಿ ಸಾಗಿಹರು
ಭೋರ್ಗರೆಯುತಲಿ

ಕಡಲತಡಿಯ ಮೀನುಗಾರರ
ಕಣ್ಣೀರು ಕೇಳುವವರಿಲ್ಲ
ಬೆಳೆದ ಬೆಳೆಗಳೆಲ್ಲ ಸರ್ವನಾಶ
ರೈತರ ಅಳುತಿಹರೆಲ್ಲ

ಶಾಂತಳಾಗು ತಾಯಿ ಗಂಗವ್ವಾ
ಏಕಿಷ್ಟು ಕೋಪ ತಾಪ
ಪ್ರಾಣಿ ಪಶು ಪಕ್ಷಿಗಳ ರೋದನೆ
ಕೇಳಿಸದೆ ಬಿಡು ಸಂತಾಪ

ಎಲ್ಲಿರುವೆ ತಂದೆ ಶಿವಶಂಕರನೆ
ಕಣ್ಣುಮುಚ್ಚಿ ಕೂಡಬೇಡ
ನಿನ್ನ ಜಲಾಭಿಷೇಕಕ್ಕೆ ಭಯಹರನೆ
ಜಲಪ್ರಳಯ ಮಾಡಬೇಡ


About The Author

Leave a Reply

You cannot copy content of this page

Scroll to Top