ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ʼಕಬಂಧʼ

ಸಂಬಂಧ ಕೊಂಡಿ ಕಳಚಿ
ಮೇಲುಗೈ ಸಾಧಿಸಿದೆ ತನ್ನತನ
ಅನುಬಂಧವಾಗಿ ಊರಾಚೆ
ಸ್ವಾರ್ಥ ವಿಶ್ವಾಸ ಘಾತುಕತನ
ಸನಿಹವಿದ್ದವರಿಲ್ಲ ಸನಿಹದಿ
ಆಂತರ್ಯದಿ ಅನತಿದೂರವೇ
ಮುನಿಸು ಬಿಗುಮಾನ ಮನದಿ
ಅರಿವು ದೂರ ಎಲ್ಲ ಅಪಾರ್ಥವೇ
ಹಿಡಿತ ಮೀರಿದ ಮಾತಿನ ಧಾಟಿ
ಹತೋಟಿ ತಪ್ಪಿದ ವಿಕಲ್ಪ ಚಿಂತನೆ
ಅಭಿಮಾನವೆನ್ನುವುದೇ ಅಜ್ಞಾನ
ಅವಿನಾಭಾವವೇ ಇಲ್ಲಿ ನಿರ್ನಾಮ
ನನ್ನವರೆoಬರು ಕನಸಿನಲ್ಲಿ ಕಣ್ಮರೆ
ದೂರವಾಗಿಹೆವು ನಮ್ಮವರಿಗೆ ನಾವು
ತೊರೆ ವಿಶ್ವಾಸ ನಾವು ಇರುವೆಡೆಯಲ್ಲೇ
ಕಳೆದುಹೋಗುತಿದ್ದೆವಾ.. ಮತ್ತೇನು
ಹಿರಿದು ಕಿರಿದು ಬೇಧವನೆ ಮರೆತು
ಕಾರ್ಯ ನಿರ್ವಹಿಸಿದೆ ಬೇಧ ತಂತು
ಗೌರವದ ನಡೆಯೇ ಇಲ್ಲಿ ದುರ್ಲಭ
ಬಂಧಿಸಿಹುದು ಬಿಡಿಸಲಾರದ ಕಬಂಧ
—————————————-
ಮಾಲಾ ಚೆಲುವನಹಳ್ಳಿ





ಭಾವ – ಅವಿನಾಭಾವ ಮತ್ತು ಸ್ವಂತಿಕೆಯ ನಡುವಲ್ಲಿನ ಸಂಕೀರ್ಣತೆಯನ್ನು, ತಮ್ಮ ಈ ” ಕಬಂಧ ” ಕಾವ್ಯಾಧಾರೆಯಲ್ಲಿ, ಪಡಿಮೂಡಿಸಿ, ಸಂಬಂಧ ಮತ್ತು ಮಾನಸಿಕ ಸ್ವಂತಿಕೆಯಲ್ಲಿನ, ಅವ್ಯಕ್ತ ಬಂಧನದ ಹಿನ್ನೆಲೆಯನ್ನು ಪರಿಣಾಮಕಾರಿಯಾಗಿ ಬಿಂಬಿಸಿ, ಸಂಭಂದಗಳಲ್ಲಿನ ಶ್ರೇಷ್ಠತೆ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಮೌಲ್ಯಗಳನ್ನು, ಅವಿನಾಭಾವತೆಯ ಪದದಲ್ಲಿ ಸೂಕ್ಷ್ಮವಾಗಿ ಹೇಳಿದ್ದೀರಿ! ಸಂಬಂಧಗಳ ಬಂಧನ, ಸ್ನೇಹದ ಸಂಕೋಲೆಯ ಸ್ವರೂಪದಲ್ಲಿದ್ದರೆ, ಆ ಆ ಸಾರ್ಥಕಬದುಕಿನ ಸಾರದ ಸ್ವರೂಪವೇ, ಈ ಕಾವ್ಯದ ಶ್ರೇಷ್ಠತೆ! ಅಭಿನಂದನೆಗಳು ಮೇಡಂ!!.