ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾತರಿಸಿ ಕಾದಳು ರಾಧೆ ಕೃಷ್ಣನಿಗಾಗಿ
ಯಾತನೆಯಲಿ ನೊಂದು
ಯಮುನೆ ತಟವೂ ಬಿಸಿಯೇರಿತು
ವಿರಹದುರಿಯಲಿ ಬೆಂದು

ಸಮಯ ಕಳೆದು ಹೋಯಿತು ವೇಗದಿ
ಪರಿವೆ ಇಲ್ಲದೇ ಹೋಯಿತೇ
ಅತ್ತಿತ್ತ ಗಮನ ಹರಿಸಿದರೂ ಕಾಯುವ
ಪ್ರಯತ್ನ ವ್ಯರ್ಥವಾಯಿತೇ

ನೀರ ಮೇಲಿನ ಗುಳ್ಳೆಯಂತೆ ಕಟ್ಟಿದ
ಕನಸೇಕೆ ಒಡೆದು ಹೋಯಿತು
ಭಾರವಾದ ಹೃದಯದಿ ನಿರಾಸೆ
ಕಟ್ಟಿಟ್ಟ ಬುತ್ತಿಯಾಯಿತು

ಎಲ್ಲಿ ಹೋಗಿರುವೆ ನೀನು ಹೃದಯದ
ಕರೆ ಕೇಳದ ಹಾಗೆ
ಕಲ್ಲಿನಂತೆ ನಿಶ್ಚಲನಾಗಿ ನಿಂತೆ ಅರಿಯದೆ
ಎನ್ನೊಡಲ ಬೇಗೆ

ನಿನ್ನೊನಲವು ಬದುಕಿನಲಿ ನನಗೆ
ಬತ್ತದ ಒರತೆ
ಭಾವನೆಗಳೇ ಸತ್ತು ಹೋದಂತಾದರೆ
ಅದೇ ಒಂದು ಕೊರತೆ

ಹರಿವ ನದಿಯಲಿ ಕಲ್ಪನೆ ಕರಗುತ
ಸಾರ್ಥಕತೆ ಪಡೆಯಬೇಕು
ಬೆರೆತ ಮನಗಳು ಮತ್ತೆ ಸೇರುವ
ಧಾವಂತದಿ ಐಕ್ಯವಾಗಬೇಕು


About The Author

1 thought on “ಅನುರಾಧಾ ರಾಜೀವ್ ಸುರತ್ಕಲ್ ಅವರ ಹೊಸ ಕವಿತೆ “ಬತ್ತದ ಒರತೆ””

Leave a Reply

You cannot copy content of this page

Scroll to Top