ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೊತ್ತು ಸರಿದರೂ ನಲ್ಲನ ಸುಳಿವಿಲ್ಲ
ಕತ್ತಲೆಯೇ ಕವಿದಿಹುದು ಬಾಳಿನಲ್ಲಿ
ಸುತ್ತಲೂ ಕೇಳುತಿಹುದು ಜೀರುಂಡೆ ದ್ವನಿಯು
ಮುತ್ತಿಹುದು ತನುವಿನಲಿ ಕಾಣದ ಭಯವು

ಎತ್ತ ನೋಡಿದರೂ ಬೆಳಕು ಗೋಚರವಿಲ್ಲ
ಸೋತು ಆರಿಹೋದ ದೀಪದ ಹಣತೆಯಂತೆ
ಚಿತ್ತದಲಿ ತುಂಬಿಹುದು ದುಗುಡಗಳ ರಾಶಿ
ಅತ್ತಿರುವೆ ಮೂಕವಾಗಿ ಮನದೊಳಗೆ

ಬಿತ್ತಿರುವ ವಿಷದ ಬೀಜದೊಳಗಿಂದ
ಹೊತ್ತಿ ಉರಿಯುತಿದೆ ದ್ವೇಷದ ಕಿಡಿಯು
ಬತ್ತಿ ಹೋಗಲಿಲ್ಲ ಎದೆಯಾಳದ ಕಿಚ್ಚು
ಎತ್ತಿ ನೀರ ಉಣಿಸಿದರೂ ರಭಸದಿಂದ

ಬುತ್ತಿಯೊಳಗೆ ಹುದುಗಿಸಲ್ಪಟ್ಟ ಒಲವು
ಸತ್ತು ಹೋಗಿಹುದು ನಿರಾಸೆಯಲಿ ಬೆಂದು
ಕತ್ತಿಯ ಅಲಗಿನಂತೆ ಚುಚ್ಚುವ ಮಾತಿನೊಳು
ಮೆತ್ತಗಾಗಿದೆ ಸೊರಗಿ ನಲುಗಿದ ಜೀವವು


About The Author

1 thought on “ಅನುರಾಧಾ ರಾಜೀವ್ ಸುರತ್ಕಲ್ ಅವರಕವಿತೆ-ತೊಳಲಾಟ”

  1. ತೊಳಲಾಟ ಕವನದಲ್ಲಿ ಮುಕ್ತವಾಗಿ ನೋವು,ದುಗುಡ, ದುಮ್ಮಾನಗಳನ್ನು ಹಂಚಿ ಕೊಂಡಿದ್ದೀರಿ ಮೇಡಂ ಸೂಪರ್.

Leave a Reply

You cannot copy content of this page

Scroll to Top