ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕೆಂಪೇರಲು ಗಗನ
ನಾಚಿದಳು ಭುವನ
ಬೆಳ್ಳಕ್ಕಿ ನಿರ್ಗಮನ
ಚಂದ್ರಮನಾಗಮನ

ಮುತ್ತುಗಳ ಮಾಲಿಕೆ
ಕೊರಳ ಸೌಂದರ್ಯಕೆ
ನೋಟದಾಯಸ್ಕಾoತಕೆ
ಪ್ರಯಾಗದ ರೂಪಿಕೆ

ತೆನೆಯೆಲ್ಲ ಕಾಳಾಗಿ
ಕಣಜವ ಸೇರಿತು
ಗಿಡವೆಲ್ಲ ಹುಲ್ಲಾಗಿ
ಬಣವೆಯೆ ಆಯಿತು

ನೂರಾಸೆಯು ತುಂಬಿದ
ಮನ ಭಾರವಾಗಿತ್ತು
ಮೂರಾ ಬಟ್ಟೆ ಬದುಕು
ಸ್ವತಃ ಹೊರೆಯಾಯಿತು

ನೇಗಿಲಿನ ಹಿಂದೆಯೇ
ಬೆಳ್ಳಕ್ಕಿಗಳ ಹಿಂಡು
ಗೆರೆಯಲ್ಲಿ ಮೇಲ್ಬಂದ
ಎರೆಹುಳುವ ದಂಡು

ಹುಳು ಉಪ್ಪಟೆ ಸಿಕ್ಕ
ಖುಷಿ ಬೆಳ್ಲಕ್ಕಿಗಳಿಗೆ
ಉತ್ತಾಗ ಹೊಲ ಚೊಕ್ಕ
ಕಾರ್ಯಖುಷಿ ಯೋಗಿಗೆ

ಮಾಮರ ಚಿಗುರಿದೆ
ನಿಸರ್ಗಕೆ ತೋರಣ
ಹಲಸು ಘಮಿಸಿದೆ
ತೋಳೆಸಿಹಿ ಸ್ಪುರಣ

ರೆಪ್ಪೆಯ ಬಡಿಯುತ
ಧೂಳನು ಸರಿಸಿದೆ
ಕಂಗಳ ಕಂಬನಿಗೆ
ಹೇಳದಿಹ ಮಾತಿದೆ

ನಿದಿರೆ ಎವೆಮುಚ್ಚಿ
ನೋಟ ನಿತ್ರಾಣವು
ಕನಸು ಗರಿಬಿಚ್ಚಿ
ಹೊಸದು ಪ್ರಪಂಚವು


About The Author

Leave a Reply

You cannot copy content of this page

Scroll to Top