ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕೂಲಿ ಕುಂಬಳಿಯವನು ನಾನು
ನನಗಾಗಿ ಮೀಸಲಿಲ್ಲ ಏನೇನು
ನನ್ನ ಬವಣೆಗಳು ಜಗವು ಅರಿತಿತೇನು
ಬಯಲು ಬದುಕನ್ನು ಯಾರಿಗೇಳಿದರೇನು

ಕಾಯಕವೇ ಕೈಲಾಸವೆಂದು
ಶ್ರಮವಹಿಸಿ ದುಡಿದೆನು ಬೆಂದು
ಕಾಯಕವೇ ನನ್ನದಾಯಿತು ಎಂದೆಂದು
ಕೈಲಾಸ ಸಿಗಲಿಲ್ಲ ನನಗೆಂದು

ಕೈ ಕೆಸರಾದರೆ ಬಾಯಿ ಮೊಸರು
ಚೋಮ, ಕರಿಯ, ಕಾಳ, ನಾಗ, ಬೆಳ್ಳಿ
ಮತ್ತು  ನಮ್ಮವ್ವ ಸಾಕವ್ವ  ಗಂಗವ್ವ
ಚೆಲ್ಲಿದರು ಮೊಸರಿಗಾಗಿ ಉಸಿರು.

ಧಣಿಯ ಹೊಲದಲಿ ದುಡಿದೆವೆ ದಣಿದು ಆಳಾಗಿ
ಮಾಲಿಕನ ಬಲಕಾಗಿ ಶ್ರಮಿಸಿದೆವು ಮಾಲಿಯಾಗಿ
ಬಗಲಲಿ ಬಟ್ಟೆಯಿಟ್ಟು ಹೊರಟೆವು ಕೈ ಖಾಲಿಯಾಗಿ
ತಮ್ಮಂತೆ ಕಾಣಲಿಲ್ಲ  ಎಂದೂ ಮನುಜರಾಗಿ

ಬೆವರು ಹರಿಸಿ ರಕ್ತ ಸುರಿಸಿದೆವು
ನಾಡು ನುಡಿಯ ಶ್ರೀರಕ್ಷೆಗಾಗಿ
ನಮ್ಮ ಹೆಸರ ಯೋಜನೆಗಳು  ನಮಗಿಲ್ಲವಾಗಿ
ಸೇರಿದವು ಸಿರಿವಂತರ ಭಾಗ್ಯವಾಗಿ.


About The Author

1 thought on “ಬಕಾಡೆ ಪಂಪಾಪತಿ ಅವರ ಕವಿತೆ-ಬಡವನ ಬವಣೆ”

Leave a Reply

You cannot copy content of this page

Scroll to Top