ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಚುಕ್ಕಿಯ ಆಟದ ನರ್ತನದಲ್ಲಿ
ಚಂದಿರನ್ಯಾಕೋ ನಗುತಿಹನು
ಅಂತರದಾಟದ ಓಟದಲಿ
ಕಾಂತಿಯ ಸೂರ್ಯನು ಮೂಡಿಹನು

ಮುಂಜಾನೆಯ ಸೊಗಸು
ಅರಳುತಲಿರಲು
ಹೂವಿನ ಪರಿಮಳ ಬೀರುವುದು
ಹಕ್ಕಿಯ ಚಿಲಿಪಿಲಿ ನಾದವ ಕೇಳಲು
ಮನವು ತನ್ಮಯಗೊಳ್ಳುವುದು

ದುಡಿಮೆಯ ಮಾಡುತ ನಗುವನು ಬೀರುತ
ಮನುಜನು ನಡೆಯುವ ಬದುಕಿನಲಿ
ಭಾವಗಳೆಲ್ಲವೂ ಸೇರುತಲಿರಲು
ಸಂಗೀತದ ಹೊನಲನು ಹರಿಸುವನು

ತೀರದ ಸನಿಹದಿ ಸಂಜೆಯ ನಡುಗೆಯು
ಹೃದಯದ ಮಾತಿಗೆ ಪೂರಕವು
ಬೀಸುವ ಗಾಳಿಯು ಮನವನು ತನಿಸಲು
ಸುಗಂಧ ಭರಿತ ಸುವಾಸನೆಯು

ಮುಳುಗುವ ಸೂರ್ಯನ ಅಂದವ ಕಾಣಲು
ಚಂದಿರ ಮೆಲ್ಲನೆ ಮೂಡುವನು
ಲಂಗರು ಹಾಕಿದ ಹಡಗುಗಳಲ್ಲಿ
ಬೆಳಕಿನ ನರ್ತನ ಕಾಣುವನು.


About The Author

1 thought on “ಮನ್ಸೂರ್ ಮೂಲ್ಕಿ ಅವರಕವಿತೆ-ತನ್ಮಯ”

Leave a Reply

You cannot copy content of this page

Scroll to Top