ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬೇಸಿಗೆಯ ಬೇಗೆಯ ತಾಪದಲಿ ಬೆಂದು
ಹೋಗುತ್ತಿರುವ ಧರಿತ್ರಿ
ವರುಣನ ಆಗಮನಕ್ಕೆ ಕಾಯುತ್ತಾ
ಮೊದಲ ಮಳೆಯ ಹನಿಗಳ ಸ್ಪರ್ಶಕ್ಕೆ
ಕಾತರದಿಂದ ತಲೆ ಎತ್ತಿ ನೀಲಾಕಾಶವನ್ನು
ನೋಡುತ್ತಾ ಕಾಯುತಿಹಳು

ಕತ್ತಲೆಯಲ್ಲಿ ಮುಳುಗಿದ್ದ ಆ ಜಗತ್ತು ಕೂಡ
ನೇಸರನಿಗಾಗಿ ಹುಡುಕಾಡುತ್ತ
ಕ್ಷಣಗಳ ಎಣಿಸುತ್ತ ಕಾಯುತಲಿ
ಉದಯಿಸಿ ಹೊಂಗಿರಣಗಳ ಆಸರೆಯಿಂದ
ಮಂಕಾಗಿದ್ದ ಜಗತ್ತನ್ನು ಮೆಲ್ಲನೆ ಚಿಗುರಿಸುತಲಿ
ಅರಳಿಸುತ ಹೂವುಗಳ ನಗುವಲ್ಲಿ ನಲಿಯುತ್ತಿದೆ

ಚೈತ್ರದಲ್ಲಿ ಚಿಗುರಿದ ಸೃಷ್ಟಿಯು
ನವ ವಸಂತ ಋತುವಿನಲ್ಲಿ
ಮಾಗಿದ ಮನಸುಗಳೆರಡು ಒಬ್ಬರೊನ್ನೊಬ್ಬರು
ಸಂದಿಸಿದಾಗ ಅನುರಾಗವು ಅರಳಿ
ಕಂಗಳಿಂದ ಪ್ರೇಮಾಂಕುರವಾಗಿ
ಪ್ರೇಮ ಲೋಕವು ಸೃಷ್ಟಿಯಾಗಿ
ಕಾಣದ ಪ್ರೀತಿಯ ಹಂಬಲಿಸುತ್ತಿದೆ…..


About The Author

Leave a Reply

You cannot copy content of this page

Scroll to Top