ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಮ್ಮ  ಸುಖದುಃಖದ ದಸ್ತಾವೇಜುಗಳ ಮೇಲೆ ನಮ್ಮದೇನೇ  ಹಸ್ತಾಕ್ಷರಯಿದೆ
ನಾವ್ ಮಾಡಿದ ಕರ್ಮಗಳ  ಫಲದ ಮೇಲೂ ನಮ್ಮದೇ ಹೆಸರಿನ ಮೊಹರುಯಿದೆ

ಯಾರೋ ಮಾಡಿದ ಕರ್ಮ, ಇನ್ಯಾರನೋ ಸುತ್ತಿಕೊಳ್ಳಲು ಸಾಧ್ಯವೇ
ಅವರವರು ಮಾಡಿದ ಅಡುಗೆ , ಅವರವರಿಗೇ ಬಡಿಸುವ ರಿವಾಜುಯಿದೆ

ಲೋಕದ ಕಣ್ಣಿಂದ ತಪ್ಪಿಸಿಕೊಳ್ಳುವುದಾದರೇ ,ತಪ್ಪಿಸಿಕೋ ಹುಲು ಮಾನವನೇ
ಆ ತ್ರಿಲೋಕನ ನೋಟದಿಂದ  ದೂರಾಗುವುದು ಅಸಾಧ್ಯ ಎಂಬ ಪ್ರತೀತಿಯಿದೆ

ಲೆಕ್ಕಕ್ಕಿಡದೇ ಎಷ್ಟೋ ಮನಸುಗಳಮುರಿದು  ನಕ್ಕು ನಲಿಯುವರಿಲ್ಲಿ
ಕೆಳಗಿಳಿವ  ಪ್ರತಿ ಹನಿಗೂ , ನೋಯಿಸಿದವರ ಹೆಸರು ಹೇಳುವ ಇರಾದೆಯಿದೆ

ಇಲ್ಲಿ ಮಾಡಿದ ತಪ್ಪಿಗೆ, ಇಲ್ಲಿಯೇ ಶಿಕ್ಷೆ ಅನುಭವಿಸಿ ಹೋಗುವುದಿದೆ ವಾಣಿ
ಬಲು ಎಚ್ಚರದಿ ಸಾಗು ಬದುಕಿನ ಹಾದಿಯಲಿ ಪ್ರತಿ ಹೆಜ್ಜೆಯ ಮೇಲೂ ದೇವರ ದೃಷ್ಠಿಯಿದೆ

————-

About The Author

6 thoughts on “ವಾಣಿ ಯಡಹಳ್ಳಿಮಠ ಅವರ‌ ಗಜಲ್”

  1. ತುಂಬಾ ಚೆನ್ನಾಗಿ ಬರೆದಿದ್ದೀರಾ ಮೇಡಂ ಗಜಲ್ ಗಳನ್ನೇ ಹೆಚ್ಚಾಗಿ ಓದುವುದು. ನನಗೆ ಸ್ಪೂರ್ತಿ ಮೇಡಮ್ ನಿಮ್ಮ ಬರವಣಿಗೆ.

    1. ತಮ್ಮ ಅಭಿಮಾನಕ್ಕೆ ಮತ್ತು ಮೆಚ್ಚುಗೆಯ ಮಾತುಗಳಿಗೆ ಹೃದಯಪೂರ್ವಕ ಧನ್ಯವಾದಗಳು

  2. ತಮ್ಮ ಒಂದೊಂದು ನುಡಿಯೂ ಅಂತರಾತ್ಮಕ್ಕೆ ಸ್ಪಂದಿಸುತ್ತವೆ. ನಿಮ್ಮ ಗಜಲ್ ಓದಿ ಜೀವನದ ನೀಜವಾದ ಅರ್ಥ ತಿಳಿಯಿತ್ತು ಒಂದೊಂದು ಪದ ಅರ್ಥಗರ್ಭಿತವಾಗಿದೆ.. ನಿಮ್ಮ ಗಜಲ್ ನಮ್ಮ ಜೀವನಕ್ಕೆ ಸ್ಫೂರ್ತಿ ತಂದಿದೆ. ತುಂಬಾ ಚೆನ್ನಾಗಿ ಬರೆದ್ದೀ ದಿರಾ. ಮೆಡಂ.

    1. ತಮ್ಮ ಅಭಿಮಾನಕ್ಕೆ , ಪ್ರೋತ್ಸಾಹದ ನುಡಿಗಳಿಗೆ ಹೃದಯಪೂರ್ವಕ ಧನ್ಯವಾದಗಳು ಮೇಡಂ

Leave a Reply

You cannot copy content of this page

Scroll to Top