ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಾವೇ ನಾಳೆ ಬಾ ಉಳಿದಿದೆಕೆಲಸ,
ಪುರುಸೊತ್ತಿಲ್ಲ ನಿಮಿಷ,
ಹುಟ್ಟೇನು ನಾನು ಪಡೆದೆನೆಂದಲ್ಲ,
ಬದುಕಲೊಂದು ಕೊಟ್ಟವಕಾಶ
ಪೂರೈಸಿ ಸಾಗೋ ಆಶಯ,

ಏಕೆ ನಡುವೆ ಮಾಡುವೆ ಅವಸರ?
ಸವಿದಿಲ್ಲ ಜೀವನ ಎಲ್ಲ ರುಚಿಕರ,
ಆಗಿಲ್ಲ ಬದುಕು ಒಲವಿನ ಸುಮಧುರ,
ಸಾವರಿಸಿ ಕೃಪೆತೋರು ತಡವಾಗಿ ಬಾ ಯಮಕರ |

ಮುಗಿದಿಲ್ಲ ಇನ್ನು ಗುರುದೇವನಿಟ್ಟ ಕಾಯಕ,
ಅವನಾಸೆಯಂತೆ ಆಗಿಲ್ಲ ನಾ ಸೇವಕ,
ಒಲವಿಂದ ಬದುಕುವುದೇ ಜೀವದಾಶಯ
ಅಲ್ಲಿವರೆಗೂ ಸಹಿಸು ಎನ್ನಯ ಜೀವವ,

ನಂಬಿದ್ದೇನೆ ನಿನ್ನಲೇ ಆಶಾಭಾವವ
ಜೀವಕಿರುವುದೇ ದಾಹ ಮೋಹ ಪರವಶ
ನನಗಿಲ್ಲ ಏನೂ ಸಾವಿನ ಭಯ,
ಬಂದರೂ ಮುಕ್ತ ಸ್ವಾಗತದಿ ಕೂಗುವೆ ಜಯ


About The Author

Leave a Reply

You cannot copy content of this page

Scroll to Top