ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಸವಣ್ಣ
ನೀನು ಬರದಿದ್ದರೆ
ನಾವು ಅಗ್ರಹಾರದ
ವೈದಿಕರ ಮನೆಯಲ್ಲಿ
ದನದ ಕೊಟ್ಟಿಗೆಯ
ಸಗಣಿ ಗೊಬ್ಬರ ಎತ್ತಬೇಕಿತ್ತು.

ಬಸವಣ್ಣ
ನೀನು ಬರದಿದ್ದರೆ
ನಾವು ಗುಡಿ ದೇವಾಲಯ
ಮಠಗಳ ಕಸ ಗುಡಿಸುವ
ದೊಡ್ಡವರ ಹೊಲದಲ್ಲಿ
ಕಸ ಕೀಳುವ ಜೀತಕ್ಕೆ ಬಲಿಯಾಗುತ್ತಿದ್ದೆವು

ಬಸವಣ್ಣ
ನೀನು ಬರದಿದ್ದರೆ
ಕನ್ನಡ ಕಲಿಯದೆ
ಸಂಸ್ಕೃತ ಪಂಡಿತರ
ಬ್ರಾಹ್ಮಣ ಪುರೋಹಿತರ
ಚಾಕರಿ ಮಾಡಬೇಕಿತ್ತು

ಬಸವಣ್ಣ
ನೀನು ಬರದಿದ್ದರೆ
ಅವರ ಮನೆಯ ಕಕ್ಕವ
ತಲೆಯ ಮೇಲೆ ಹೊತ್ತು
ಅವರ ಪಾದುಕೆಗೆ ನಮ್ಮ
ಚರ್ಮದ ಜೋಡು ಮಾಡಿಕೊಡಬೇಕಿತ್ತು

ಬಸವಣ್ಣ ನೀನು ಬಂದೇ
ಕಂಗೆಟ್ಟ ಕನ್ನಡದ ಕುಲಕ್ಕೆ
ಬಾಳ ಬಟ್ಟೆಯಾಗಿ
ಬದುಕುವ ಹೊಸ ಕನಸಿನ
ಕ್ರಾಂತಿ ಸೂರ್ಯನಾಗಿ

ನಮೋ ನಮೋ ಬಸವಣ್ಣ


About The Author

4 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ʼನೀನು ಬರದಿದ್ದರೆʼ”

Leave a Reply

You cannot copy content of this page

Scroll to Top