ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎದೆಯ ಕದವ ತೆರೆ
ಮುದುಡಿದ ಮನಕೆ
ಸದೆ ಬಡಿಯುವ ಹುನ್ನಾರಕೆ

ಬಿರುಕುಗಳ ಜಾಲ ಪತ್ತೆ ಹಚ್ಚಿ
ಮರುಗುವ ಮನಕೆ
ಸೆರಗಿನಲಿ ಸಂತೈಸಲು.

ಸೋನೆ ಮಳೆ ಸುರಿಸಿ
ನೊಂದು ಬೆಂದು ಹೋದ ಕಡೆ
ಸೌಹಾರ್ದತೆ ಕಲಿಸಲು.

ಮುಚ್ಚಿದ ಕಣ್ಣುಗಳು
ಚುಚ್ಚಿದ ಅನುಭವಕೆ
ಬಿಚ್ಚಿ ಹೇಳಿ ಬಿಡಲು.

ನುಚ್ಚು ನೂರಾದ ಬಯಕೆ ತೀರಿಸಲು
ಹೆಚ್ಚೆಂದು ಬೀಗುವುದ ಬಿಡಿಸಿ
ಒಂದಾಗಿ ಬೆರೆತು ಬಾಳಲು.

ಮಂದ ಬೆಳಕು ಬರಲಿ
ಕವಿದ ಕತ್ತಲೆ ಸರಿಸಿ
ಸ್ವಚ್ಚಂದ ಹಕ್ಕಿಯಾಗಿ ಹಾರಲು.

ಭಿನ್ನ ಬಗೆಯ ಮರೆತು
ಹಗೆಯ ಮತ್ತಿಗೆ ಮುತ್ತಿಗೆ ಹಾಕಿ
ಒಳ ಧಗೆಯ ತಣಿಸಲು.


About The Author

Leave a Reply

You cannot copy content of this page

Scroll to Top