ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮತ್ತೇ ಚಿಗುರುತ್ತವೆ ಈಗ ಗಿಡಮರಬಳ್ಳಿಗಳು
ಮತ್ತೇ ಹಾರುತ್ತವೆ ರೆಕ್ಕೆ ಹರಡಿ ಬಾನಾಡಿಗಳು

ಶಿಶಿರದ ಜಡಕೆ ಬಳಲುತ್ತಿದ್ದರು ಚರಾಚರಗಳು
ಮತ್ತೇ ಕೊನರುತ್ತವೆ ಹುದುಗಿದ ಬಯಕೆಗಳು

ಪಚ್ಚೆಯನು ಮೆತ್ತಿಕೊಂಡವು ಮುಗುಳುಗಳು
ತುಂಬುತ್ತವೆ ಹಾಳೆಯನು ಹಸಿರು ಬರಹಗಳು

ಕರೆ ಕೂಗುತ್ತವೆ ಪಂಚಮದಲಿ ಕೋಕಿಲಗಳು
ಕರೆಯುತ್ತವೆ ಉನ್ಮಾದದಿ ವಿರಹಿ ಭಾವಗಳು

ಹೇಮಂತನ ಕಟ್ಟಾಜೆ ಬಳಲುತ್ತಿದ್ದ ಜೀವಗಳು
ಸಾರುತ್ತವೆ ನೀತಿಯ ಒಂದೊಂದು ದಿನಗಳು

ಗುಬ್ಬಿ,ಗಿಳಿ ಗೊರವಂಕ ಹಾಡಿವೆ ಬಾನಾಡಿಗಳು
ನಲಿಯುತ್ತವೆ ಅಳಲು ಬದಿಗಿರಿಸಿದ ಮೊಗಗಳು

ಗಂಧ ಮರುತನಾಗಮನ ಕಂಪಿಸಿವೆ ಎಲೆಗಳು
ಪುಳಕಿಸುತ್ತವೆ ಒಲವ ನೆನಪಿಸಿದ ಈ ದಿನಗಳು

ಬೇವಿದೆ ಬೆಲ್ಲವಿದೆ ಎಲ್ಲವೂ ಸಾರಗಳು ಅನು
ಮರಳಿ ಕರೆಯುತ್ತಾರೆ ಕಾಯ್ದಿರಿಸಿದ ಸ್ವಪ್ನಗಳು


About The Author

Leave a Reply

You cannot copy content of this page

Scroll to Top