ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿರಾಶೆಯ ಕೋಪದ
ಕೋಪಕ್ಕೆ ಇಳಿದು
ಮುಗಿ ಬಿದ್ದ ದಿನವದು
ಬಂದೇ ನೀ ದೀವಿಗೆಯಾಗಿ ಎಂದು…..

ಆಶೆಯ ಸಿರಿಯಾಗಿ
ದಿವ್ಯತೆ ಒಂದು ಕಿರಣಾಗಿ
ಬಂದೆ ಉಗಮವಾಗಿ
ನೆಲೆ ನಿಂತೆ ಮನದಾಳದಲ್ಲಿ ಎಂದು….

ಚಿವುಟಿ ಬೆಳೆವ ಚಿಗುರದು
ಘಾಸಿಗೊಳ್ಳಿಸಿದರಂದು
ಅದಾವುದು ಅರಿಯದು
ಮರಳಿ ಚಿಗುರಿತು ಕನಸು ಎಂದು….

ಹೆಮ್ಮರವಾಗುವ ಆತುರ
ಹೂ ಹಣ್ಣು ಫಲಿಸುವ ಕಾತುರ
ಉಮ್ಮಸ್ಸಿನಲ್ಲಿ ಎತ್ತಿ ತಲೆ ಎತ್ತಿ
ನಿಂತೆ ಸಣ್ಣಗೆ ಚಿಗುರೊಡೆಯಿತಿ ಎಂದು..

ಸಕಲ ಪಡಿಯನು ದಾಟಿ
ದೂರ ದೂರ ಸಾಗಿ
ಮುಂದೆ ನೋಡುವ
ಆಶಯ ಹೊತ್ತು ಬಂದೆ ಅಂದು….

ಮತ್ತೆ ನುಲಿದು ‌ಬೆಳೆದು
ಹೆಮ್ಮೆಮರವಾಗುವೆ
ಫಲಿಸುವೆನೆಂದು… ಕನಸು ನನಸಾಗುವದೆಂದು


About The Author

Leave a Reply

You cannot copy content of this page

Scroll to Top