ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಮ್ಮ ಶಕ್ತಿ ನಮ್ಮ ದುಡಿಮೆ
ಇರಲಿ ಬದುಕಿನ ಧ್ಯೇಯವು
ದುಡಿತದಿ ತಿಂದ ಅನ್ನವು
ಸ್ವಾಭಿಮಾನದ ಪ್ರತೀಕವು

ಆಮೀಷದ ಫಲಗಳೆಲ್ಲವೂ
ಕ್ಷಣಿಕ ಕ್ಷಣದ ಮಜಲುಗಳು
ನಂಬಿ ದುಡಿಮೆ ಮರೆತರೆ
ಬದುಕಿಗೆ ಉಂಟೆ ಆಸರೆಯು

ನಮ್ಮ ತನ ನಮ್ಮ ಮನ
ನಮ್ಮ ಒಡೆತನದ ಆಸ್ತಿಯು
ನಮ್ಮ ಹಾದಿಲಿ ನಾವ ನಡೆಯಲು
ಬೇಕೆ ಇನ್ನೋಬ್ಬರ ಸಹಾಯವು

ಸ್ವಾರ್ಥದ ಸುಳಿಯಲಿ ನಾವು ಸಿಲುಕಿ
ನಮ್ಮ ತನವನೇ ಅದರೊಳು ತುರುಕಿ
ಇದ್ದು ಬಿದ್ದು ಕಳೆದ ಮೇಲೆ
ಸಿಗುವುದೇ ಮತ್ತೆ ನಾಳೆ

ದುಡಿತದಲಿ ಸ್ವರ್ಗ ಇದೆ
ನಂಬಿಕೆಯಲಿ ಶಕ್ತಿ ಇದೆ
ಇಷ್ಟ ಇದ್ದರೆ ಸಾಕು ನಮಗೆ
ನೆಮ್ಮದಿ ಗೂಡು ಇರುವುದು ಜೊತೆಗೆ

ಬೇಕೆ ನಮಗೆ ಅನ್ಯಾಯದ ಸೊತ್ತು
ಇರಬೇಕು ನಾವು ಬದುಕಿಯೂ ಸತ್ತು
ಸವಿದರೆ ಈಗ ಹೆಚ್ಚೆಚ್ಚು ತುತ್ತು
ನಾವಾಗುವೆವು ಅವರ ಸೊತ್ತು

ಬೆಳೆಯೊಣ ಬದುಕೋಣ
ನಮ್ಮ ತನದಿ ಮೆರೆಯೋಣ
ನಮ್ಮ ಶಕ್ತಿಯಿಂದ ಬಳೆದು
ನಾಡಲಿ ಹೆಸರು ಉಳಿಸೋಣ

ಹಂಗಿನ ಬಾಳು ಬದುಕಿ
ಹೆಸರು ಪಡೆದರೇನು ಬಂತು
ಈ ಕ್ಷಣಕೆ ಮುಂದೆ ಬಂದರೂ
ಆ ಕ್ಷಣ ಅಳುತಿದೆ ಹಿಂದೆ ನಿಂತು


About The Author

3 thoughts on “ಪ್ರಮೋದ ಜೋಶಿ ಅವರ ಕವಿತೆ-ಅಳುತಿದೆ ಹಿಂದೆ ನಿಂತು”

  1. ಆತ್ಮ ಸಂತೃಪ್ತಿಗೆ ಢಾಂಬಿಕತೆಯ ಜೀವನ ಬೇಕಾಗಿಯೇ ಇಲ್ಲ, ನಿಸ್ವಾರ್ಥದ ಬದುಕಿನಲ್ಲಿ ಸಿಗುವ ತೃಪ್ತಿ ಕೋಟಿ ಕೊಟ್ಟರೂ ಸಿಗುವುದಿಲ್ಲ ಅಂತ ನನ್ನನಿಸಿಕೆ.

Leave a Reply

You cannot copy content of this page

Scroll to Top