ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನುರಾಗದ ಆಲಾಪವು ಅವನ ಹೃದಯ ತಟ್ಟಬೇಕು
ಸಮಾರಂಭದ ಶೋಭೆಗಾಗಿ ಚಪ್ಪಾಳೆ ತಟ್ಟಬೇಕು

ಪಕ್ಷಿಯಾಗಿ ಹಾರುತ ಈ ಜಗದ ಸೊಬಗು ಕಾಣವ ಬಯಕೆ
ಜೊತೆಯಲಿ ಶಿವ ಉಮೆಯರ ಕೈಲಾಸ ಶಿಖರ ಮುಟ್ಟಬೇಕು

ಬೆಸೆದ ತನುವಿನಲ್ಲಿ ಸಂಶಯದ ಗಾಳಿಯು ಸುಳಿಯದಿರಲಿ
ಎರಡು ಜೀವಿಯ ಮಧ್ಯೆ ಒಲವಿನ ಭರವಸೆ ಹುಟ್ಟಬೇಕು

ಬದುಕನು ಸಾಗಿಸಲು ಆಶ್ರಯಕೆ ಇರಲಿ ಪುಟ್ಟ ಗುಡಿಸಲು
ಇಳೆಯಲಿ ಜನ ಮೆಚ್ಚುವ ಪ್ರೀತಿಯ ಮಹಲು ಕಟ್ಟಬೇಕು

“ಪ್ರಭೆ”ಸಪ್ತಪದಿ ತುಳಿದು ಒಂದಾಗಿದ್ದೇವೆ ಭಯವೇಕೆ
ಅವನ ಕರುಣೆಯಲ್ಲಿ ಸಂಸಾರ ಸಾಗರ ದಾಟಬೇಕು


About The Author

Leave a Reply

You cannot copy content of this page

Scroll to Top