ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಮಬಾಳು ಸಮಪಾಲು
ನೀತಿ ನಂಬಿದವ
ಮನುಕುಲದ ಅನ್ನ ಬ್ರಹ್ಮನಿವ
ನಮ್ಮ ರೈತ

ಇಲ್ಲ ಅವಗೆ ಶಾಂತಿ ನೆಮ್ಮದಿ
ಬೆಳೆಗೆ ಕೈ ತುಂಬಾ ಬೆಲೆ
ನೀಡದು ಸರಕಾರ ಬೆಂಬಲ ಬೆಲೆ
ಹೂಡಬೇಕು ಹರತಾಳ
ಸತ್ಯಾಗ್ರಹ ತನ್ನ ಹಕ್ಕಿಗಾಗಿ
ನಮ್ಮ ರೈತ

ಮಾಡಬೇಕು ಉಪವಾಸ
ಮಾರುಕಟ್ಟೆಗಾಗಿ ಸರಕಾರದ ನೀತಿಯ ವಿರೋಧಕ್ಕಾಗಿ
ನದಿ ನೀರಿಗಾಗಿ
ಕಾರ್ಖಾನೆಗಳ ಮುಂದೆ
ಬಾಕಿ ಬಿಲ್ ಪಾವತಿಗಾಗಿ
ನಮ್ಮ ರೈತ

ಕಳಪೆ ಬೀಜ ಗೊಬ್ಬರ
ಹಾಕಿ ಮೋಸ ಹೋದ
ಬೆಳೆವ ಭೂಮಿ ಬರಡು ಬೀಳು
ಮನೆಯ ಮುಂದೆ
ಸಾಲ ವಸೂಲಾತಿ ಆಳು
ಕಂಡು ಅಳುಕುವ
ನಮ್ಮ ರೈತ

ರೈತನ ಬೆನ್ನೆಲುಬು ಮುರಿದು
ಮೆರೆವ ಸಕ್ಕರೆ ಮಾತಾಡುವ
ಕಾರ್ಖಾನೆ ಮಾಲೀಕರ
ವೇದಿಕೆಯ ಭಾಷಣ
ರಾಜಕೀಯ ಪುಡಾರಿಗಳ ಘೋಷಣ
ಹೌಹಾರುವ
ನಮ್ಮ ರೈತ

ಕುಸಿದ ಆತ್ಮ ಬಲದಿ
ಭೂಮಿಗಿಳಿಯು
ಆಕಾಶಕ್ಕೆ ಮುಖ ಮಾಡಿ
ಮೊರೆಯಿಡುವ
ಕಪ್ಪುಗಟ್ಟಿದ ಮೋಡ ಕಂಡು
ಪಂಚಭೂತಗಳಿಗೆ ನಮಿಸಿ
ಮತ್ತೆ ನೇಗಿಲು ಹಿಡಿಯುವ
ನಮ್ಮ ರೈತ


About The Author

Leave a Reply

You cannot copy content of this page

Scroll to Top