ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬೆಳಗಾವಿಯ ಸುವರ್ಣ ಸೌಧದಲ್ಲಿ
ಹತ್ತು ದಿನಗಳ ಚಳಿಗಾಲದ ಅಧಿವೇಶನದಲ್ಲಿ
ಪಕ್ಷ ವಿಪಕ್ಷಗಳ ಮಾತಿನ ಚಕಮಕಿ ಭರದಲ್ಲಿ

ಒಂದು ಕಡೆಗಿರುವುದು ಆಡಳಿತ ಪಕ್ಷ
ಎದುರುಗಡೆಯಲ್ಲಿಯೇ ವಿರೋಧ ಪಕ್ಷ
ಇವರಿಬ್ಬರ ಮಧ್ಯೆ ಮೇಲ್ಗಡೆ ಸಭಾಧ್ಯಕ್ಷ

ಆಡಳಿತ ವಿರೋಧ ಪಕ್ಷಗಳ ಪ್ರಶ್ನೋತ್ತರ
ಮುಡಾ ಅಕ್ರಮ ಅಬಕಾರಿ ಭ್ರಷ್ಟಾಚಾರ
ಶಿಶುಗಳ ಬಾಣಂತಿಯರ ಸಾವಿನ ವಿಚಾರ

ಪಕ್ಷದೊಳಗಿನ ಬಣಗಳ ನಡುವೆ ಬಡಿದಾಟ
ಪಂಚಮಸಾಲಿ ಮೀಸಲಾತಿಗೆ ಹೋರಾಟ
ನೇಕಾರ ಕಾರ್ಮಿಕರ ಸಮಸ್ಯೆಗಳ ಪರದಾಟ

ವಕ್ಫ ಹೆಸರು ರೈತರ ಜಮೀನಿನ ಪಹಣಿಯಲ್ಲಿ
ವಿಪಕ್ಷದ ನಾಯಕರು ವಿರೋಧಿಸಿದರಲ್ಲಿ
ಎಲ್ಲ ಪ್ರಕರಣಗಳ ಸದ್ದು ಗದ್ದಲ ಸದನದಲ್ಲಿ

ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ
ವಿವಿಧ ಸಂಘಟನಾ ಸಂಸ್ಥೆಗಳು ಪ್ರತಿಭಟಿಸಿ
ಒತ್ತಾಯಿಸಿದರು ಸರ್ಕಾರಕ್ಕೆ ಧರಣಿ ನಡೆಸಿ

ವಸತಿ ಊಟೋಪಚಾರ ಸಾರಿಗೆ ವ್ಯವಸ್ಥೆಗಾಗಿ
ಸಚಿವರು ಅಧಿಕಾರಿಗಳ ಆತಿಥ್ಯಕ್ಕಾಗಿ
ಕೋಟಿಗಟ್ಟಲೆ ಖರ್ಚು ವೆಚ್ಚ ಹೆಚ್ಚಾಗಿ

ಸರ್ಕಾರದ ಹಣ ಪೋಲಾದರೂ ಫಲವಿಲ್ಲ
ಅಧಿವೇಶನವು ಕಾಟಾಚಾರದಂತೆ ಆಗದಿರಲಿ
ಸಮಸ್ಯೆಗಳು ಬಗೆಹರಿದು ಅಭಿವೃದ್ಧಿ ಇರಲಿ
(ಕನಿಷ್ಠ ಮುಂದಿನ ಅಧಿವೇಶನದಲಿ)


About The Author

Leave a Reply

You cannot copy content of this page

Scroll to Top