ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾಡಗೀತೆಗೆ ನಾಡಿಮಿಡಿದ
ರಸರುಷಿ ನೀ
ನವಿಲು ಕಲ್ಲು ಕವಿಶೈಲ
ನೀಲಗಗನದಿ ಹಕ್ಕಿಯೊಳಗೆ ದೇವರ ರುಜುಕಂಡು
ನೂರಮತವ ನೂಕಿ
ಭಾರತಾಂಬೆಯೋಳ್ ಜನಿಸಿ
ವಿಶ್ವ ಪಥವ ಬೆಳೆಸಿ
ಮನುಜ ಮತವ ತಿಳಿಸಿ
ಕನ್ನಡ ಡಿಂಡಿಮ ಬಾರಿಸಿ
ಜ್ಞಾನ ಪೀಠದ ಮೊದಲ ಗರಿ ಭುವನೇಶ್ವರಿಗೆ ಮುಡಿಸಿ

ಕವನವಾಯಿತು ನವಿಲುಗರಿ
ಕೂಗಿ ಮೊಳಗಿತು
ಕೊಳಲು ಪಾಂಚಜನ್ಯ
ಕಲಾ ಸುಂದರಿ
ಪ್ರೇಮ ಕಾಶ್ಮೀರ
ಚಂದ್ರ ಮಂಚಕೆ ಬಾ ಚಕೋರಿ

ಹಕ್ಕಿ ಪಕ್ಷಿ ಹೂಬನಕೆ
ಪಕ್ಷಿಕಾಶಿ
ಮಲೆನಾಡಿನ ಸೆರಗಲಿ
ಮದುಮಗಳು ಕಂಡು
ದೀನದಲಿತರ ನೋವಿಗೆ
ಶೂದ್ರ ತಪಸ್ವಿ
ಕಾರ್ತಿಕದ ಕತ್ತಲಲಿ
ಬಸವ ಬೆಳಕು ಬೆಳಗಿ
ರಾಮಾಯಣಂ ಮಹಾ ಕಾವ್ಯ ರಚಿಸಿ
ನೇಗಿಲ ಯೋಗಿಯ
ಬೆವರನು
ಕಿಂದರಿಜೋಗಿಯ ಕುಶಲವ ತೋರಿದ
ಕಲಾ ತಪಸ್ವಿ
ಜಗದ ಕವಿ
ಯುಗದ ಕವಿ
ತೆರೆದಿದೆ ಮನ ಓ ಬಾ ಅತಿಥಿ
ಕನ್ನಡಿಗರ ಮನಮಂದಿರದಲಿ ನಿಮ್ಮದೆ ಪ್ರತೀತಿ.


About The Author

1 thought on “ಕುವೆಂಪು ನೆನಪಲ್ಲೊಂದು ಕವಿತೆ-ಲಲಿತಾ ಪ್ರಭು ಅಂಗಡಿ”

Leave a Reply

You cannot copy content of this page

Scroll to Top