ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂವಿಂಧಾನದ ತಳಹದಿಯಲ್ಲಿ
ಅಸಮಾನತೆಯ ತೊಲಗಿಸಲು
ಪ್ರತಿಭಟನೆಗಿಳಿದ
ಕವಿತೆ..೧

ಶೃಂಗಾರ,ಛಂದಸ್ಸು, ಅಲಂಕಾರಗಳೆಲ್ಲವ್ವ
ದಿಕ್ಕರಿಸಿ
ಸ್ವತಂತ್ರತೆಯನ್ನು ಘೋಷಿಸಿಕೊಂಡ
ಕವಿತೆ.೨

ರಾಜಕೀಯ ದೊಂಬರಾಟ
ಜಾತಿ-ಮತಗಳ ಎಣಿಯಾಟ
ಎಲ್ಲವನ್ನೂ ಮೀರಿ ನಡೆದ
ಕವಿತೆ.೩.

ನವ್ಯವೂ ಅಲ್ಲದ
ನವೋದಯಕ್ಕೂ ಒಗ್ಗದ
ಎಡ-ಬಲಗಳ ಪಕ್ಕಕ್ಕೆಸರಿಸಿದ
ಕವಿತೆ.೪.

ಒಂದೇ ತತ್ವಕ್ಕೆ ಜೋತು ಬೀಳದ
ವಿಷಯ ವಸ್ತುವಿನ ಆಯ್ಕೆಯ
ಅಧಾಕಾರ ಹೊಂದಿರುವ
ಕವಿತೆ.೫.

ಜಾಗತೀಕರಣ, ಖಾಸಗೀಕರಣ
ಉದಾರೀಕರಣಗಳ
ಕಡು ವೈರಿಯಾದ
ಕವಿತೆ.೬.

ಸ್ರೀವಾದ,ಸಮತಾವಾದ
ಎಲ್ಲ ವೈಚಾರಿಕತೆಗಳ
ಆಚೆಗೆ ವಿಸ್ತರಿಸಿದ
ಕವಿತೆ.೭.

ಇದು ಪೂರ್ವಾಗ್ರಹ ಪೀಡಿತರಿಂದ
ವಿಮರ್ಶಿಸಲಾಗದ
ಯಾರೊಬ್ಬರು ಮೆಚ್ಚದ
ಸಮಾಜ ತಿದ್ದುವ
ಆದರೆ
ಸಮಾಜವೇ ರಿಜೆಕ್ಟ್ ಮಾಡಿದ ಕವಿತೆ.೮.
——————————–

About The Author

3 thoughts on “ಸುರೇಶ ತಂಗೋಡ ಅವರ-ರಿಜೆಕ್ಟ್ ಆದ ಕವಿತೆ”

Leave a Reply

You cannot copy content of this page

Scroll to Top