ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿಲ್ಲು ಹೇ ಮನುಜ ಭೂತಾಯಿ ಮುನಿಸಿಕೊಂಡಾಳು
ನಿನ್ನಯ ದಾಹಕೆ ತಾಯೊಡಲ ಬಗೆದು
ಅದಿರು ಖನಿಜವ ತೆಗೆದು
ಜಲದಾಹದ ನೆಪದಿ ತಾಯ್ ಹೊಟ್ಟೆಯ ಅಗೆದು
ಕೊಟ್ಟಿಹೆ  ಸಾವಿರ ನೋವ

ನಿನ್ನ ಹಸಿವ ನೀಗಲು ಬೊಗಸೆ ಅನ್ನ ಕೊಡುವಳು
ನಿನ್ನ ದಾಹ ತಣಿಸಲು ಗಂಗೆ ತುಂಗೆ ಹೆತ್ತಳು
ನೂರ್ಕಾಲ ಬಾಳಲು ತಂಗಾಳಿಯಾಗಿ ಹರಿವಳು
ನಿನಗೆ ನೆರಳಾಗಲು ಗಿಡಮರಗಳ ಕೊಟ್ಟಳು
ನಿನ್ನ ಸೌಖ್ಯ ಕಾಗಿ ಕರುಳು ಹರಿದು ಕೊಟ್ಟಳು

ದೇಹ ಪುಷ್ಟಿಯಾಗಲು ಹಣ್ಣು ಕಾಯಿಕೊಟ್ಟಳು
ನಿನ್ನ ಆನಂದಿಸಲು ಸೌಂದರ್ಯವ ತಳೆದಳು
ನದ ನದಿಗಳು ಸಾಗರ ಸರೋವರಗಳು
ಬೆಟ್ಟ ಗುಡ್ಡ ಸಹ್ಯಾದ್ರಿ ಶಿಖರಗಳು
ಮುತ್ತು ರತ್ನ ವಜ್ರ ವೈಢೂರ್ಯ ಗಭ೯ದೊಳು

ನಿನ್ನ ಕಾಪಿಡಲು ಮಳೆ ಬಿಸಿಲು ತಂಪನ್ನಿತ್ತಳು
ವನಸ್ಪತಿ ಔಷಧಿ ಮದ್ದನು ಮುದದಿ ಕೈಗಿತ್ತಳು
ಹೂವಲ್ಲಿ ಮಧು ಸುಗಂಧಗಳ ಬಚ್ಚಿಟ್ಟಿಹಳು
ನಿನಗೆ ಬೆಳಕಾಗಲು ಸೂರ್ಯನ ಕರೆವಳು
ನಿನ್ನ ದಣಿವ ನೀಗಲು ಸೂರ್ಯನ ಮರೆಯಾದಳು


About The Author

2 thoughts on “ನಾರಾಯಣ ರಾಮಪ್ಪ ರಾಠೋಡ ಅವರ ಕವಿತೆ-ಭೂತಾಯಿ ಮುನಿಸಿಕೊಂಡಾಳು ….!!”

Leave a Reply

You cannot copy content of this page

Scroll to Top