ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದಾಸ ಶ್ರೇಷ್ಠರು ಇವರಯ್ಯ
ಮಾನವ ಕುಲಕ್ಕೆ ಮಾದರಿಯಾಗಿ
ಮಹಾನ್ ಸಂತ ಸಾರಥಿಯಾದ
ದಾಸ ಶ್ರೇಷ್ಠರು ಇವರಯ್ಯ.

ಹರಿ ಭಕ್ತ ಮಹಾಮಹಿಮರು
ಕಾಗಿನೆಲೆಯ ಆದಿಕೇಶವ ನಾಮಾಂಕಿತರು
ಮೌಢ್ಯವ ಅಳಿಸಲು ಮುಂದಾದ
ದಾಸ ಶ್ರೇಷ್ಠರು ಇವರಯ್ಯ.

ಸವಿನುಡಿಯ ದಾರಿ ದೀಪವಾಗಿ
ಅಂಧಕಾರದ ಜ್ಞಾನ ಜ್ಯೋತಿಯಾಗಿ
ಭಕ್ತಿಯ ಬೆಳಕು ಚೆಲ್ಲಿದ
ದಾಸ ಶ್ರೇಷ್ಠರು ಇವರಯ್ಯ.

ತಂಬೂರಿಯ ಸ್ವರ ನುಡಿಸಿ
ಜನಮನಗಳ ಹೃದಯ ತಲ್ಲಣಿಸಿ
ಭೋಗ ವೈಭೋಗದ ನೀತಿ ಸಾರಿದ
ದಾಸ ಶ್ರೇಷ್ಠರು ಇವರಯ್ಯ.

ಕೀರ್ತನೆಗಳ ಹಾಡುತ ಸಾಗಿ
ಕುಲವೆಂಬ ಮೂಢರ ಕೂಗಿ
ಕುಲದ ನೆಲೆ ಹುಡುಕಿರೆಂದ
ದಾಸ ಶ್ರೇಷ್ಠರು ಇವರಯ್ಯ.

ಕನಕದ ಗುಣ ತನ್ನೊಳಗಿತ್ತು
ಚಿನ್ನದ ನುಡಿಮುತ್ತುಗಳ ನಾಡಿಗಿತ್ತು
ಕನಕದಾಸ ಎಂಬ ಮಹಾತ್ಮನಾದ
ದಾಸ ಶ್ರೇಷ್ಠರು ಇವರಯ್ಯ.


About The Author

Leave a Reply

You cannot copy content of this page

Scroll to Top