ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆಸರೆ ಬಯಸಿದ ಜೀವ
ಮಗನ ಬೆಳೆಸಿತು ನೋಡ
ಇಳಿ ವಯಸ್ಸಿನಲಿ ತನಗೆ
ಆಸರೆಯ ಊರುಗೋಲಾಗಲೆಂದು.

ಮಡಿಲಲಿ ಹೊತ್ತು ತುತ್ತ ಇತ್ತು
ವಿದ್ಯೆಯಿತ್ತು ಸಂಸ್ಕಾರವ ಕೊಟ್ಟು
ಬೆಳಸಿದರು ಮಗನ ನಲಿಯುತ
ಕುಲ ಕೀರ್ತಿ ಬೆಳಗಲೆಂದು.

ಮಗನ ಬೆಳಸಿದ ಜೀವ
ಮದುವೆ ಮಾಡಿತು ನೋಡ
ವಂಶ ಕೀರ್ತಿ ಬೆಳಗಲೆಂದು
ಮನೆತನವ ಉಳಿಸಲೆಂದು.

ಜೊತೆಯಾದ ಸತಿಗೆ
ಒಲಿದಿತ್ತು ಮನವು
ಮರೆತಿತ್ತು ಹೆತ್ತ ಕರುಳ
ಪ್ರಣಯದ ಹಾದಿಯಲಿ.

ಮಗನ ಬೆಳೆಸಿದ ಜೀವ
ಮರುಗಿ ತಾಳದೇ ನೋವ
ಸವೆಸಿ ಮುಗಿಸಿತು ಬದುಕು
ನನಸಾಗದೇ ಹೋಯ್ತು ಕನಸು..


About The Author

1 thought on “ಡಾ. ಮಹೇಂದ್ರ ಕುರ್ಡಿ ಅವರಕವಿತೆ-ಬತ್ತಿದ_ಆಸೆ”

Leave a Reply

You cannot copy content of this page

Scroll to Top