ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೊನ್ಕಲ್ ಶಾಯಿರಿಲೋಕ” ಕೃತಿಗೆ ಡಾ.ತೊಂಟದ ಸಿದ್ಧಲಿಂಗ ಶ್ರೀ ಪುಸ್ತಕ ಪ್ರಶಸ್ತಿ

ಕನ್ನಡ ಪುಸ್ತಕ ಪರಿಷತ್ತು ವಿಜಯಪುರ ಅವರು ಕೊಡಮಾಡುವ ಡಾ.ತೊಂಟದ ಸಿದ್ಧಲಿಂಗ ಶ್ರೀ ಪುಸ್ತಕ ಪ್ರಶಸ್ತಿ ಯು ಗಿರಿನಾಡು ಜಿಲ್ಲೆಯ ಲೇಖಕ ಸಿದ್ಧರಾಮ ಹೊನ್ಕಲ್ ಅವರ ೨೦೨೩ ರಲ್ಲಿ ಪ್ರಕಟವಾದ ಹೊನ್ಕಲ್ ಶಾಯಿರಿಲೋಕ ಶಾಯಿರಿ ಗಜಲ್ ಕೃತಿಗೆ ದೊರಕಿದೆ. ಪ್ರಶಸ್ತಿಯು ರೂ.ಹತ್ತು ಸಾವಿರ ಗೌರವಧನ ಹಾಗೂ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿದೆ. ನಾಡಿನ ವಿವಿಧ ಪ್ರಕಾರದ ಐವರು ಲೇಖಕ ಲೇಖಕಿಯರಿಗೆ ಈ ಪ್ರಶಸ್ತಿ ದೊರಕಿದ್ದು ದಿನಾಂಕ ೧-೧೨-೨೦೨೪ ರಂದು ವಿಜಯಪುರದಲ್ಲಿ ನಡೆಯಲಿರುವ ಕನ್ನಡ ಪುಸ್ತಕ ಪರಿಷತ್ತಿನ ಒಂದು ದಿನದ ಸಾಹಿತ್ಯ ಸಮ್ಮೇಳನದಲ್ಲಿ ನಾಡಿನ ಖ್ಯಾತ ಹಿರಿಯ‌ ಲೇಖಕ ಡಾ.ವೀರಣ್ಣ ರಾಜೂರ ಸಾಂಸ್ಕೃತಿಕ ಚಿಂತಕರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು‌ ಕನ್ನಡ ಪುಸ್ತಕ ಪರಿಷತ್ತು ಅಧ್ಯಕ್ಷರಾದ ಡಾ.ಫ.ಗು.ಸಿದ್ಧಾಪುರರವರು ಹಾಗೂ ಪ್ರಧಾನ ಕಾರ್ಯದರ್ಶಿ ಶಂಕರ ಬೈಚಬಾಳರವರು ಲೇಖಕ ಸಿದ್ಧರಾಮ ಹೊನ್ಕಲ್ ಅವರಿಗೆ ಅಭಿನಂದಸಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


About The Author

Leave a Reply

You cannot copy content of this page

Scroll to Top