ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆಸೆಗಳಿವೆ ನೂರು‌
ಮನದೊಳಗೆ ನೋಡು
ತೀರದೆ ಉಳಿದಿವೆ
ಮನ ಗೊಂದಲ ಗೂಡು

ಹಾಕು‌ ಮನಕೆ ಕಟ್ಟು
ಓಡದಿರು ಹಿಂದೆಯೆ
ಕಟ್ಟದಿರೆ ಲಗಾಮು
ಸಿಗದದು‌ ಕುದುರೆ

ಯೋಚನೆಗಳು ಎಂತೋ
ಅಂತೆ ನಮ್ಮ‌ ನಡತೆ
ಹರಿದಷ್ಟೂ ಹರಿವು
ನೆಲದಾಳ ಒರತೆ

ಎಲ್ಲೆ ಎಲ್ಲವ ಬಿಡು
ಹಚ್ಚಿಕೊಬೇಡ ಏನೂ.
ಹೊರಟು ಹೋಗುವದು
ಅದಷ್ಟೇ ಅಲ್ಲ ನೀನೂ

ಮನದ ಓಟಕಿಲ್ಲ
ಇನಿತಾದರೂ.ತಡೆ
ಗೌರವ ತರುವದು
ಕೇವಲ ನಮ್ಮ ನಡೆ

ಕಾಯಬೇಡ ಯಾರಿಗೂ
ಜಗವದೂ ಕಾಯದು
ನಿನಗಾಗಿ ಕಾಯುವೆ
ಎನ್ನುವುದೆ ಸುಳ್ಳದು

ತನಗಾಗಿ ಇಹುದು
ಅಲ್ಲವೋ ನಿನಗಾಗಿ
ಎಲ್ಲವೂ ಇರುವದು
ತನ್ನ ಉದ್ದೇಶಕಾಗಿ

ಮರೆಯಬೇಕು ನಾವು
ಅವರಿರದ ನೋವ
ಬಾಳದು ಓಡಬೇಕು
ಧರಿಸಿ ಹೊಸ ಭಾವ
.
ಒಂದಲ್ಲ ಎರಡಲ್ಲ
ಬಾಳಲಿ‌ ನೂರು ನೋವು
ಆದರೂ ನಡೆದಿದೆ
ನಿತ್ಯ ಬಾಳ ಪಥವು


About The Author

Leave a Reply

You cannot copy content of this page

Scroll to Top