ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗೆಳೆಯರೇ
ನಾನೂ ಅಳುತ್ತೇನೆ
ಹೀಗೆ ಒಬ್ಬನೇ
ಮರದ ಮರೆಗೆ
ಗೋಡೆಯ ಹಿಂದೆ
ದಿಂಬಿಗೆ ತಲೆಯೊರಗಿ
ಮುಖ ಮುಚ್ಚಿಕೊಂಡು
ಒಬ್ಬನೇ ಅಳುವ ಪ್ರಯತ್ನ
ಎಂದೋ ತುಂಬಿಕೊಂಡಿದ್ದ
ದುಃಖದ ಮಡುವು
ನೋವು ಕಷ್ಟಗಳ ಕಸರು
ಕಿತ್ತೆಸೆಯಲು ಮತ್ತೆ ಮತ್ತೆ
ಅಳಬೇಕೆನ್ನುತ್ತೇನೆ
ಹೊರಗೆ ಹುಸಿ ನಗೆ
ಬಣ್ಣದ ಅಲಂಕಾರ
ಒಳಗೊಳಗೇ ನಿಲ್ಲದ ಬಿಕ್ಕುವಿಕೆ
ಯಾರೂ ಗುರುತಿಸಿದ ನನ್ನಳುವು
ನನ್ನವಳ ಸೂಕ್ಷ್ಮ ಮನಸ್ಸಿಗೆ ಗೋಚರ
ಬಂದು ಕೈಯೊತ್ತಿ ಹೇಳಿದಳು
ಇರುವೆ ನಲ್ಲ ನಿನ್ನ ಜೊತೆಗೆ
ಬಿಟ್ಟು ಬಿಡು ನೋವ ಎಂದಾಗ
ಕಣ್ಣೀರು ಕಡಲು ಕಟ್ಟೆಯೊಡೆದು
ನಾನೂ ಅಳುತ್ತೇನೆ ಆಗಾಗ

ಹೀಗೆ ಒಬ್ಬನೇ


About The Author

15 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ನಾನೂ ಅಳುತ್ತೇನೆ”

  1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಸುಂದರ ಕವಿತೆ ಧನ್ಯವಾದಗಳು ಸರ್

    1. ಮಳೆ ಸುರಿಸಿ ಹಗುರಾದ ಮೋಡದಂತೆ
      ಅತ್ತೂ ಮನಸಿನ novella ಮರೆಯಬೇಕು.
      ಅಲ್ವಾ ಸರ್ I

  2. ಒಮ್ಮೊಮ್ಮೆ ಹೊರಹಾಕುವ ದುಃಖದ ಮಡುವು… ಅದನ್ನು ಸಾಂತ್ವನಗೊಳಿಸಲು ಕೈಹಿಡಿದ ಸಂಗಾತಿಯ ಭರವಸೆಯ ನುಡಿಗಳು
    … ಮನ ತಟ್ಟುವ ಕವನ

    ಸುತೇಜ

  3. ಗೀತಾ ಜಿ ಎಸ್

    ಅರ್ಥ ಪೂರ್ಣ ಅಭಿವ್ಯಕ್ತಿ ಉತ್ತಮ ಸಾಹಿತ್ಯ ಕೃಷಿ

  4. ಜಯಶ್ರೀ ಪಾಟೀಲ್

    ಹೊರಗೆ ಹುಸಿನಗೆ ಬಣ್ಣದ ಅಲಂಕಾರ, ಒಳಗೊಳಗೆ ನಿಲ್ಲದ ಬಿಕ್ಕುವಿಕೆ… ಚೆಂದದ ಸಾಲುಗಳು … ವಾಸ್ತವತೆಯ ಬಿಂಬಿಸುವ ಸುಂದರ ಕವನ ಸರ್

  5. ಅನ್ನಪೂರ್ಣ ಸಕ್ರೊಜಿ

    ಭಾವನೆಗಳನ್ನು ಹೊರಹಾಕುವ ಮಾರ್ಗ, ಎದೆ ತುಂಬಿ ಬಂದಾಗ ಕಣ್ಣೀರು ಕಡಲುಕ್ಕಿ ಹರಿದಾಗಲೇ ಮನಕೆ ನೆಮ್ಮದಿ. ಆದರೆ ಅದನ್ನರಿತು ಸಾಂತ್ವನಗೊಳಿಸುವ ಸಂಗಾತಿ, ಮೃದು ಹೃದಯವಿರಲು ಇನ್ನೂ ಅತ್ತು ಹಗುರಾಗ ಬೇಕೆನಿಸುತ್ತದೆ.

  6. ಶಕುಂತಲಾ ಕಟಕೊಳ

    ಕವಿತೆ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮ ಕವನಕ್ಕೆ ನಿಮ್ಮ ಕವನವೇ ಸಾಟಿ.

  7. ಗೌರಮ್ಮ ಹಾಲಭಾವಿ

    ಅಳಬೇಕು ಅತ್ತು ಹಗುರಾಗಬೇಕು.
    ಮನ ಪ್ರಕ್ಷುಬ್ದವಾದಾಗ ಅದೊಂದೇ ಸಂತೈಸಿಕೊಳ್ಳುಲು ಇರುವ ಆಸರೆ. ಸಂತಯಿಸುವ ಹೆಗಲು ಸಿಕ್ಕು ಆ ದುಗುಡವೆಲ್ಲ ಕಣ್ಣೀರಾಗಿ ಹರಿದು ಹೋದಾಗ ಅದೇನೋ ವಿಲಕ್ಷಣ ಶಾಂತಿ!

Leave a Reply

You cannot copy content of this page

Scroll to Top