ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪವಿತ್ರಾತ್ಮನ ಬಲ ಗುರುವಾಗಿ ಒಳಗಿದ್ದೊಡೆ 
ಪ್ರೇತ ಪ್ರಾರಬ್ಧ ಎತ್ತಣದು ಜಗದೊಳಗೆ  
ಪರದೈವ ಕಾಣು ಗಂಗಯ್ಯ 

ಭಂಗುರದ ಬಾಳೆಂಬ ಬಡಿದಾಟಕೆ ಬೆಚ್ಚದೆ 
ಬವಣೆಯ ಭಾವಕ್ಕೆ ಬಸವಳಿದು ಬತ್ತದೆ 
ಬೇಕಾಗಿ ಬಾಳು ಗಂಗಯ್ಯ

ಹುಸಿಯಾಟ ಕಟ್ಟಿಟ್ಟು ಜಗದಾಟ ಕೈಬಿಟ್ಟು
ಹೂಮನದಿ ಹೊಸೆದ ಹೊಂಗನಸ ಬಿಚ್ಚಿಟ್ಟು 
ಹಸಿರಾಗು ಜಗದಿ ಗಂಗಯ್ಯ 

ಯಶದ ತೃಷೆಗೆ ಕೆಸರ ಹಂಗೇಕೆ ಯೋಗಿತಾ

ಯಶೋನಿಧಿಯ ಯಶದ ನೆಲೆವೀಡಿನೊಳು 
ಯಶಸ್ಕರನಾಗು ಗಂಗಯ್ಯ

——————

About The Author

2 thoughts on “ಗಂಗಾಧರ ಬಿ ಎಲ್ ನಿಟ್ಟೂರ್ ಕವಿತೆ-ಯಶಸ್ಕರ”

Leave a Reply

You cannot copy content of this page

Scroll to Top