ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಒಂದು ಬಿಡುಗಡೆ ಬೇಕು
ನಿತ್ಯದ ಗಡಿಬಿಡಿಯ ಬಾಳಿನಲಿ
ಯಾರಿಗೂ ಪುರಸೋತ್ತು ಇಲ್ಲ
ಇಂದಿನ ಜೀವನದ ಗೋಳಲಿ
ಯಾರಿಗೆ ಯಾರೂ ಇಲ್ಲ
ಅರ್ಥವಿಲ್ಲದ ಜಗದಲಿ
ಕಾಂಚಾಣಂ ಕಾರ್ಯ ಸಿದ್ದಿ
ಪ್ರತಿ ನಿತ್ಯದ ಕಾರ್ಯದಲಿ
ಈಗೀಗ ನಗುವು ಮೂಡುತ್ತಿಲ್ಲ
ಯಾರೆಂದರೆ ಯಾರ ಮೊಗದಲಿ
ಇನ್ನೊಬ್ಬರನ್ನು ನೋಡಿ ಬೇಯುತ್ತಿದ್ದಾರೆ
ಹೊಟ್ಟೆಯ ಕಿಚ್ಚಿನಲಿ
ಅವರವರ ಸಂಕಟ ಅವರವರಿಗೆ
ಮಾಡಿದ ಪಾಪ ಸುತ್ತಿಕೊಳ್ಳುವುದು
ಉರುಳಾಗಿ ಅವರದೇ ಕೊರಳಿಗೆ
ಯಾವ ಔಷಧಿಯೂ ಇಲ್ಲ
ವೈದ್ಯ ಲೋಕದಲಿ ಹೊಟ್ಟೆಕಿಚ್ಚಿಗೆ
ಒಳಗೊಳಗೆ ಸುಟ್ಟಿ ಹೋಗುವರು
ಹೊಟ್ಟೆ ಉರಿಗೆ ದ್ವೇಷದ ಕಿಡಿಗೆ
ಬೇಕಿಲ್ಲ ನಮ್ಮ ಎಲ್ಲಾ ಕಾಯಕಕ್ಕೆ
ಜಗದ ಜನರಾ ಮೆಚ್ಚುಗೆ
ಇರಲಿ ಒಳ್ಳೆಯ ಕಾರ್ಯಕ್ಕೆ
ಅಂತರಂಗದ ಒಪ್ಪಿಗೆ
ಯಾರು ಮೆಚ್ಚಿದರೇನು
ಯಾರು ಪ್ರಶಂಶಿಸಿದರೇನು
ನಮ್ಮ ತಪ್ಪು ಒಪ್ಪಿನ ಅರಿವು
ನಮ್ಮೊಳಗೆ ಇರದೇನು
ಆತ್ಮ ವಿಮರ್ಶೆಯು ಕೊಡುವ
ಮನದ ಕನ್ನಡಿ ಎದುರು
ಉಳಿದೆಲ್ಲವೂ ಶೂನ್ಯ ಶೂನ್ಯ
ಅಂತರಂಗದ ನೆಮ್ಮದಿಯಷ್ಟೇ
ಈ ಜೀವ ಜೀವಕ್ಕೆ ಮಾನ್ಯ ಮಾನ್ಯ
ಅಂತರಂಗ ಬಹಿರಂಗ ಪರಿಶುದ್ಧವಾಗಿರಲು ಮನಸ್ಸಿಗೆ ನೆಮ್ಮದಿಯ ಪ್ರಾಪ್ತಿಯು


About The Author

Leave a Reply

You cannot copy content of this page

Scroll to Top