ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜೀವನ ಜೋಳಿಗೆಯೊಳು ನಿರೀಕ್ಷೆಗಳ ನೂರೆಂಟು ಬುತ್ತಿಯಿರುವುದೇ ಮನುಜ
ಜಗದೊಡೆಯನೇ ಎತ್ತಿ ಕೈಗೀಯುವ ತನಕ ತಾಳುವುದೇ ಮನುಜ

ಹಿಡಿತವಿರದೆ ಓಡುವುದು ಮನವೆಂಬ ಮದಗಜ ಬಲು ಸಹಜ
ಹೊತ್ತೊತ್ತಿಗೆ ಹದವಾದ ಹಿತನುಡಿಯೌಷಧ ಹೊಯ್ಯುವುದೇ ಮನುಜ

ಆಸೆಯ ಕೂಸಿನ ಹಸಿವು ಹಠವ ಹತ್ತಿಕ್ಕುವುದು ಅನಿವಾರ್ಯ ಅನುಜ
ತೀರದ ತೃಷ್ಣೆಗೆ ಮಣೆಹಾಕದೆ ಪ್ರಾಪ್ತಿಯಲಿ ತೃಪ್ತಿ ಕಾಣುವುದೇ ಮನುಜ

ಸದ್ಭಾವವಿದ್ದಲ್ಲಿ ಕ್ಷೇಮಕ್ಕೆ ಕ್ಷಯವೆಂದಿಗೂ ಬಾರದು ನಿಜ
ಸುಕೃತ  ಘೃತ ಸ್ವಾದಿಸೋ ಮುನ್ನ ಸಂಕಷ್ಟದ ಬಿಸಿ ಸೋಕುವುದೇ ಮನುಜ

ಎದೆಯುಪ್ಪರಿಗೆಯ ಕೊಪ್ಪರಿಗೆಯಲ್ಲಿದೆ ಕನಸುಗಳ ಕಣಜ
ಕಾಠಿಣ್ಯ ನನಸಿನ ಫಲ ದಕ್ಕಲು ಶ್ರಮವಿಡುವುದೇ ಮನುಜ

ಸೋತ ಭಾವದೊಡಲಲ್ಲೂ ಬಿತ್ತುತ್ತಿರು ‘ಮಾಲಾ’, ಭರವಸೆಯ ಬೀಜ
ಪ್ರೀತಿ ಪ್ರಣತಿ ಉರಿಯಲು ದ್ವೇಷ ದವಾನಲವನಾಗಾಗ ಆರಿಸುವುದೇ ಮನುಜ


About The Author

Leave a Reply

You cannot copy content of this page

Scroll to Top