ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಚೂಪು ಹುಬ್ಬಿನ
ತೀಕ್ಷ್ಣ ಕಂಗಳಲಿ
ಸದಾವಕಾಲದಲಿ
ಸತ್ಯ ಹುಡುಕಾಟ..
ಹರಿತ ಕತ್ತಿಯಂಥ
ನೇರ ಮಾತಿನಲೂ
ಶೋಧದ ಹೋರಾಟ
ಆದರೂ ಮೃದು ಹೃದಯಿ…
ನಾಡ ಮೂಲೆ ಮೂಲೆಯಲಿ
ಮಣ್ಣ ಕಣ ಕಣದಲಿ
ಶಿಲಾ ಶಾಸನಗಳಲಿ
ಓಲೆಗರಿಗಳಲಿ ಸದಾ
ಬಸವಣ್ಣನ ಕಾಣ್ವ ಹಂಬಲ…
ಶರಣರಾ ವಚನಗಳ
ಜಗದಗಲ ಹರಡಿ
ಕನ್ನಡದ ಕಂಪನು
ಬೀರಿದ ಮಹಾಮಹಿಮರು…
ಮಾನವ ಧರ್ಮದ ಉಸಿರಾಗಿ
ಸತ್ಯನಿಷ್ಠೆಯ ಕಾಯಕದಲಿ
ಜೀವನವನೇ ತೇಯ್ದು
ಅದಕಾಗೇ ಬಲಿದಾನ ನೀಡಿ
ಅಮರರಾದ ನಿಮಗೆ
ಸಾವಿರದ ಶರಣು..ಶರಣು..!


About The Author

Leave a Reply

You cannot copy content of this page

Scroll to Top