ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವನಿಂದ ಬರುವ ಮೆಸೆಜುಗಳಲ್ಲಿ
ಇವತ್ತೇನು ಕೆಲಸ ಎನ್ನುವುದು ಒಂದು
ಸರಿ- ಉತ್ತರ ಏನು ಹೇಳಲಿ

ನಿನಗೆ ಮೆಸೆಜಿಸಿ ಪ್ರತಿಕ್ರಿಯೆಗಾಗಿ ಕಾಯುವುದು,
ಕಾಯುವ ಕಾತರ ನೀಗಿ ಸಹವಾಸ ಸಾಕಿನ್ನು ಎಂದು ಮಾಗುತ್ತಲೇ ಮತ್ತೊಂದು ಮೆಸೆಜ್ “ಉಂಡ್ಯಾ” ಎಂದು
ಒಹ್!
ಇವನಿಗೆ ಅದೆಷ್ಟು ಕಾಳಜಿ ಎಂದು ಮಾಗಿದ್ದು ಮರೆತು ಬೀಗುತ್ತಲೆ ಮತ್ತೆ
ಹ್ಞೂಂ…
ನೀನುಂಡ್ಯಾ ಎನ್ನುತ್ತಾ ಉಂಡನೋ … ಎಂದು ತಿಳಿಯಲು ಮತ್ತೊಂದು ಗಂಟೆ ಕಾಯುವುದು

ಈಗವನ ಪ್ರಶ್ನೆಗೆ ಉತ್ತರಿಸಲು
ತೊಡಗಿದ್ದೇನೆ

ಲೇಯ್ ಕೇಳಿಲ್ಲಿ
ನನ್ನ ಕೆಲಸ ಕಾಯುವುದು
ನಿನ್ನ ಒಂದೊಂದು ಸಂದೇಶಕ್ಕಾಗಿ

ಕರೆ ಮಾಡಿ ಸಂಪರ್ಕ ಕಡಿದಾಗ ನಿರುತ್ಸಾಹಳಾಗಿ ಸಂದೇಶದ ಟುಂಯ್ಗುಡುವ ಮೊಬೈಲಿನ ಸದ್ದಿಗಾಗಿ

ನೋಡೋ..
ನನಗೆ ಕಾಯುವ ತಾಳ್ಮೆ ಇಲ್ಲ
ಸಾಧ್ಯವಾದರೆ ಕರೆ ಮಾಡು ಎಂದುದ ನೆನೆದು ಈಗ ಕರೆದಾನೆಂದು
ಮತ್ತೆ ರಿಂಗಣಕೆ ಕಿವಿಯಾಗವುದು ಎಂದು

ಇದು ಮುಂಜಾನೆಯಿಂದ ಸಂಜೆವರೆಗು ಸಂಚರಿಸುವ
ಸಂದೇಶಗಳ ಬಾಬತ್ತು

ಏನಾಗಿದೆ ನನಗೆ
ನಾನು ಉಂಡೆನೋ ಎಂದು ಕೇಳುವ ಒಂದು ದನಿಗಾಗಿ
ಕಾಯುವ ತವಕ ಯಾಕೆ

ಅದರ ಹೊರತಾದ ಮಾತು ಇಲ್ಲ, ಕಥೆಯೂ..
ಅದರೂ ಎಲ್ಲ ಮರೆತು ಕಾಯುವುದೇಕೆ!


About The Author

1 thought on “ಭಾರತಿ ಅಶೋಕ್ ಅವರ ಕವಿತೆ- ಸಂದೇಶಗಳು”

Leave a Reply

You cannot copy content of this page

Scroll to Top