ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಮತಿ ಕೃಷ್ಣಮೂರ್ತಿ

ಭಾವಸೆರೆ

ದೀಪವಾಗಿ ಬೆಳಕ ಕೊಡಲು
ಹೊರಟ ಬದುಕಿಗೆ
ಅಡಿಯಲಿದ್ದ ನಿಶೆಯ
ನಂಟು ಮೀರಲಾಯಿತೆ?

ತೆಪ್ಪವಾಗಿ ಭವ ಸಾಗರ
ದಾಟ ಹೊರಟರೆ
ಬಿದಿರ ತಟ್ಟೆ ಹಂಗು
ಕಳಚಿ ಉಳಿಯಲಾಯಿತೆ?

ಸಮಿಧೆಯಾಗಿ ಅಗ್ನಿ
ಕುಂಡದಲ್ಲಿ ಬಿದ್ದರೂ
ಪುಣ್ಯ ಸಿಗುವ ಸ್ವಾರ್ಥವನ್ನು.
ತೊರೆಯಲಾಯಿತೆ?

ಮರಣ ಶಯ್ಯೆಯಲ್ಲಿ ಇರುವ
ಕುಟುಕು ಜೀವಕೂ
ಬಂಧ ಮುಕ್ತವಾಗೋ ಬಯಕೆ
ಬೇಡವಾಯಿತೆ?

ಭಾವ ಬಂಧನಕ್ಕೆ
ಸಿಲುಕಿ ನಟಿಸೋ ಪಾತ್ರಕೆ
ಸೂತ್ರ ಕಿತ್ತು ಹಾರಬಲ್ಲ
ಧೈರ್ಯ ಎಲ್ಲಿದೆ?


ಸುಮತಿ ಕೃಷ್ಣಮೂರ್ತಿ

About The Author

Leave a Reply

You cannot copy content of this page

Scroll to Top