ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕೇಳಿರಿ ಕೇಳಿರಿ ಮುದ್ದು ಮಕ್ಕಳೇ

ಡಾ ಅನ್ನಪೂರ್ಣಾ ಹಿರೇಮಠ

ಕೇಳಿರಿ ಕೇಳಿರಿ ಮುದ್ದು ಮಕ್ಕಳೇ
ನಕ್ಷತ್ರಗಳ ತೇಜವ ಪಡೆದು ಮಿನುಗಿದವನ
ಸಪ್ತಋಷಿಗಳ ತೇಜಸ್ಸಿನಿಂದ ಬೆಳಗಿದವನ
ಭುವನೇಶ್ವರಿ ಒಡಲಲಿ ಮುತ್ತಾದವನ
ಕಥೆಯನು ಕೇಳಿರಿ ಚಿತ್ತಗೊಟ್ಟು//

ದೇವರ ಕೃಪೆಯ ಕಂದನಾಗಿ
ಮಡಿಲ ಬೆಳಗಿದ ರತ್ನದಂತೆ
ಜ್ಞಾನ ತುಂಬಿದ ಕಳಸದಂತೆ
ಹೊಳೆಯತೊಡಗಿದ ದಿನದಿನ
ಕೇಳಿರಿವನ ಗಾಥೆಯ ಮನಸನಿಟ್ಟು//

ಎಲ್ಲ ವಿದ್ಯೆ ಕರಗತ ಇವನಿಗೆ
ಇವನ ಮೀರಿಸಲಾಗದು ಏಕಾಗ್ರತೆಯಲಿ
ಹಿಂದೂಸ್ತಾನದ ಸಿಂಧುವಾಗಿ ಬೆಳೆಯತೊಡಗಿದ
ಗುರುಹಿರಿಯರ ತಾಯಿಯ ಮುದ್ದಿನ ಮಗನಾಗಿ
ಜಗ ದೇವಾಲಯದಲಿ ಮಿಂಚತೊಡಗಿದ ಕೇಳಿರಿ//

ಸಾರೋಟಿನ ಸಾರಥಿಯಾಗುವ ಆಸೆಯಲಿ
ಜಗ ಪರ್ಯಟನದ ಗುರಿ ಹೊಂದಿ
ದೇವನಿರುವಿನ ಕುರುಹು ತೋರುವ ಗುರುವ
ಹುಡುಕುತ ಆತ್ಮ ದೇಹದ ಸಂಬಂಧ ಕೆದಕಿದ
ಮನಮೆಚ್ಚಿದ ರಾಮಕೃಷ್ಣರ ಗುರುವೆಂದು ಸ್ವೀಕರಿಸಿದ//

ಹಿಂದೂ ಸಾಮ್ರಾಜ್ಯದ ಏಳಿಗೆ ಬಯಸಿದ
ಜಗತ್ತೆಲ್ಲ ಸುತ್ತಿ ಸತ್ಯ ಸಾರುತ ಸಾಗಿದ
ವಾಗ್ಮಿ ದೈವೀಪುರುಷ ದೇವದೂತನಾದ
ರಾರಾಜಿಸಿ ರಂಜಿಸಿ ಯುವಶಕ್ತಿಯ ಎಚ್ಚರಿಸಿ
ಯುಕ್ತಿ ಶಕ್ತಿಗಳಿಸಿ ದೇಶದೇಳ್ಗೆಗೆ ಬಾಳಿ ಎಂದನೀವ ಕೇಳಿ//


ಡಾ ಅನ್ನಪೂರ್ಣಾ ಹಿರೇಮಠ

About The Author

1 thought on “ಮಕ್ಕಳ ದಿನಾಚರಣೆ ವಿಶೇಷ”

Leave a Reply

You cannot copy content of this page

Scroll to Top