ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಕ್ಕಳ ದಿನಾಚರಣೆ

ಸೋಮಲಿಂಗ ಬೇಡರ

ಬಲಿಪಾಡ್ಯಮಿ

ಸುರಾಸುರರ ಕಾಲದಲ್ಲಿ
ಇದ್ದನೊಬ್ಬ ರಾಜನು
ಅವನ ಹೆಸರು ಮಹಾಬಲಿಯು
ಮಹಾಶೂರ ಅಸುರನು

ವಿಷ್ಣುದೇವರೆಂದರವಗೆ
ಭಕ್ತಿ ಉಕ್ಕಿ ಬರುವುದು
ಧೈರ್ಯದಲ್ಲಿ ಅವನಿಗಾರು
ಸಾಟಿಯಾಗಿ ನಿಲ್ಲರು

ಮೂರು ಲೋಕಕೆಲ್ಲ ಬಲಿಯು
ಆಗಿ ಚಕ್ರವರ್ತಿಯು
ಆಳುತಿರಲು ದೇವತೆಗಳು
ಹೆದರಿ ನಡುಗುತ್ತಿದ್ದರು

ಸುರರು ಹೋದರೆಲ್ಲ ಕೂಡಿ
ವಿಷ್ಣು ದೇವನಲ್ಲಿಗೆ
ಬಲಿಯ ಭಯವು ನಮಗೆ ದೇವ
ಎಂದರವರು ಮೆಲ್ಲಗೆ

ಹರಿಯು ತನ್ನ ಬಳಗಕೆಲ್ಲ
ಅಭಯವನ್ನು ಕೊಟ್ಟನು
ಕುಬ್ಜ ವಾಮನ್ರೂಪಿಯಾಗಿ
ಭೂಮಿಗಿಳಿದು ಬಂದನು

ಭಿಕ್ಷೆಗಾಗಿ ಬಲಿಯ ಬಳಿಗೆ
ಹೋಗಿ ನಿಂತ ವಾಮನ
ಬೇಡು ನಿನಗೆ ಏನು ಬೇಕು
ಕೊಡುವೆ ಎಂದ ದಾನವ

ಒಡನೆ ಕುಬ್ಜ ಮೂರು ಹೆಜ್ಜೆ
ಜಾಗವನ್ನು ಕೇಳಿದ
ಮಹಾಬಲಿಯು ಅದನು ಕೊಟ್ಟು
ದಾನಶೂರನೆನಿಸಿದ

ವಾಮನ ರೂಪಿ ಕುಬ್ಜ ಹರ
ದೊಡ್ಡದಾಗಿ ಬೆಳೆದನು
ಒಂದು ಹೆಜ್ಜೆ ಧರೆಯ ಮೇಲೆ
ಧಾಪುಗಾಲಿಟ್ಟನು

ಮತ್ತೆ ಒಂದು ಪಾದ ನಭದಿ
ಪೂರ್ತಿ ಊರಿ ನಿಂತನು
ಇನ್ನೊಂದೆಲ್ಲಿ ಇಡಲಿ ಎಂದು
ಕೇಳ್ದ ಹರನು ಬಲಿಯನು

ಅದನು ತನ್ನ ತಲೆಯ ಮೇಲೆ
ಇಡಲು ಬಲಿಯು ಕೋರಿದ
ಹಾಗೆ ಮಾಡಿ ಬಲಿಗೆ ಹರನು
ಪಾತಾಳಕೆ ತಳ್ಳಿದ

ಕೊನೆಯ ಘಳಿಗೆ ಬಲಿಗೆ ವಿಷ್ಣು
ವರವನೊಂದು ಕೊಟ್ಟನು
ಅದರ ಫಲವೆ ಬಲಿಪಾಡ್ಯಮಿ
ಬಲಿಯ ಪೂಜೆಗಿಟ್ಟನು
—————————————-

ಸೋಮಲಿಂಗ ಬೇಡರ

About The Author

Leave a Reply

You cannot copy content of this page

Scroll to Top