ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ

ಸುಮ್ಮನಿದ್ದು ಬಿಡಿ ಸ್ವಾಮಿ
ಕೂಗಾಡುವವರು ಕೂಗಾಡಲಿ
ಹಾರಾಡುವವರು ಹಾರಾಡಲಿ !!

ಸುಮ್ಮನಿದ್ದು ಬಿಡಿ ಸ್ವಾಮಿ
ಮೋಸ ಮಾಡುವವರು ಮೋಸ ಮಾಡಲಿ
ಅನ್ಯಾಯ ಮಾಡುವವರು ಅನ್ಯಾಯ ಮಾಡಲಿ !!

ಸುಮ್ಮನಿದ್ದು ಬಿಡಿ ಸ್ವಾಮಿ
ದಗಲ್ಬಾಜಿ ಮಾಡುವವರು ದಗಲ್ಬಾಜಿ ಮಾಡಲಿ
ಹಗಲು ದರೋಡೆ ಮಾಡುವವರು ಹಗಲು ದರೋಡೆ ಮಾಡಲಿ !!

ಸುಮ್ಮನಿದ್ದು ಬಿಡಿ ಸ್ವಾಮಿ
ಲಂಚ ನುಂಗುವವರು ಲಂಚ ನುಂಗಲಿ
ಹಡಗು ಮುಳುಗಿಸುವವರು ಹಡಗು ಮುಳುಗಿಸಲಿ !!

ಸುಮ್ಮನಿದ್ದು ಬಿಡು ಸ್ವಾಮಿ
ಬಡವರ ರಕ್ತ ಹೀರುವವರು ರಕ್ತ ಹೀರಲಿ
ಮುಗ್ಧರ ಕೊಳ್ಳೆ ಹೊಡೆಯುವರು ಕೊಳ್ಳೆ ಹೊಡೆಯಲಿ !!

ಸುಮ್ಮನಿದ್ದು ಬಿಡಿ ಸ್ವಾಮಿ
ಉರಿಯುವವರು ಉರಿಯಲಿ
ಮತ್ಸರ ಪಡುವವರು ಮತ್ಸರ ಪಡಲಿ !!

ಸುಮ್ಮನಿದ್ದು ಬಿಡಿ ಸ್ವಾಮಿ
ಭ್ರಷ್ಟಾಚಾರ ಮಾಡುವವರು ಭ್ರಷ್ಟಾಚಾರ ಮಾಡಲಿ
ಶೋಷಣೆ ಮಾಡುವವರು ಶೋಷಣೆ ಮಾಡಲಿ !!

ಎಲ್ಲವನ್ನು ನೋಡುತ್ತಾ ಹೀಗೆ
ಸುಮ್ಮನೆ ಕುಳಿತರೆ ಹೇಗೆ ಸ್ವಾಮಿ ?
ಯಾರೋ ಬಂದು ನಿಮ್ಮನ್ನು ರಕ್ಷಿಸುತ್ತಾರೆಂದು
ತಿಳಿದಿದ್ದರೆ ನಿಮ್ಮಂಥ ಮೂರ್ಖ ಯಾರಿಲ್ಲ !
ಇದು ಕಲಿಯುಗ ಸ್ವಾಮಿ !
ನಿಮ್ಮ ರಕ್ಷಣೆಗೆ ಯಾವ ದೇವರೂ ಬರುವುದಿಲ್ಲ !
ನಿಮ್ಮ ರಕ್ತ ಸುರಿದರು, ಹರಿದರೂ ಪರವಾಗಿಲ್ಲ
ಏನಾದರೂ ಮಾಡಿ ಇದಕ್ಕೆ ನೀವೇ ಅಂತ್ಯ ಹಾಡಿ !
ನಾಳೆಯ ನಿಮ್ಮವರ ಒಳ್ಳೆಯ ಬದುಕಿಗಾಗಿ,
ಒಳ್ಳೆಯ ಸಮಾಜಕ್ಕಾಗಿ, ಒಳ್ಳೆಯ ದೇಶಕ್ಕಾಗಿ
ಇಂಥ ದುಷ್ಟರನ್ನು ಭ್ರಷ್ಟರನ್ನು ಬುಡ ಸಮೇತ ಕಿತ್ತುಹಾಕಿ ಸ್ವಾಮಿ !!
ಆಗ ಸಮಾಜ ನೆಮ್ಮದಿಯಿಂದ ಬದುಕಲು ಸಾಧ್ಯ !!


ಪ್ರೊ. ಸಿದ್ದು ಸಾವಳಸಂಗ,

About The Author

Leave a Reply

You cannot copy content of this page

Scroll to Top