ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ದೇವಿದಾಸ ನಾಯಕ

ಕನ್ನಡಾಂಬೆಗೆ ನಮನ

ಕನ್ನಡಾಂಬೆ ನಿನಗೆ ನನ್ನ ನಮನ
ನಾಡಿಗಾಗಿ ಮುಡಿಪು ಎನ್ನ ಜೀವನ
ರಕ್ಷಿಸಬೇಕು ತಾಯಿ ಈ ಪ್ರಕೃತಿ
ಬಿಡಲೇಬೇಕು ಮಾನವ ವಿಕೃತಿ

ಏನಿಲ್ಲ ಹೇಳಮ್ಮ ಈ ನಾಡಿನಲಿ
ಹೇಗಮ್ಮ ಕನ್ನಡ ನಾ ಮರೆಯಲಿ?
ಸಾಹಿತ್ಯವ ತುಂಬಿರುವ ಈ ನಾಡು
ವಿಶೇಷ ತಾಣಗಳ ನೆಲೆವೀಡು

ವೀರಧೀರೆಯರ ನೆನೆಯಲೇಬೇಕು
ಮಾಡಿದ ಕಾರ್ಯವ ಸ್ಮರಿಸಲೇಬೇಕು
ಕನ್ನಡವ ಮರೆತರೆ ಬದುಕೇ ಇಲ್ಲ
ಮರೆತು ನಡೆದರೆ ಆತ ಮನುಷ್ಯನೆ ಅಲ್ಲ

ಬರಹದಲಿ ಕವಿಗಳು ಮುಂದಿಹರು
ಕಲೆಯೊಳಗೆ ಹಿಂದಿಲ್ಲ ಕಲಾವಿದರು
ಸ್ವರ್ಗವೇ ಆಗಿಹುದು ಕರುನಾಡು
ತಟ್ಟದಿರಲಿ ನುಡಿಗೆ ಎಂದೂ ಕೇಡು

ಸರಳ ಸುಂದರ ನಮ್ಮೀ ಭಾಷೆ
ನಮ್ಮಲ್ಲಿರಲಿ ಸದಾ ಓದುವ ಆಸೆ
ನಾಡು ನುಡಿ ಸಂಸ್ಕೃತಿ ನಮ್ಮ ರಕ್ಷಣೆ
ಅನ್ಯಾಯವಾದರೆ ನಾವೇ ಹೊಣೆ


ದೇವಿದಾಸ ನಾಯಕ

About The Author

2 thoughts on “ದೇವಿದಾಸ ನಾಯಕ ಕವಿತೆ-ಕನ್ನಡಾಂಬೆಗೆ ನಮನ”

  1. ಕನ್ನಡವೇ ಸತ್ಯ ಕನ್ನಡವೇ ನಿತ್ಯ…. ಕನ್ನಡ ಭಾಷೆಯ ಸಮ್ಮಿಳಿತ ಕನ್ನಡಿಗನ ಹೃದಯ ಮಿಡಿತಕ್ಕೆ ಸಮಾನ….ಅದನ್ನು ಕಡೆಗಣಿಸುವತ್ತ ಯೋಚಿಸುವುದು ಮಹಾ ಪಾಪ! ಸುಂದರ ಭಾವ ಸೂಕ್ಷ್ಮ ಸಂವೇದನೆ

Leave a Reply

You cannot copy content of this page

Scroll to Top