ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅಮುಭಾವಜೀವಿ ಮುಸ್ಟೂರು

ಕೊಳಲನೂದು ಮಾಧವ

ಕೊಳಲನೂದು ಮಾಧವ
ಕಳೆಯಲೆಲ್ಲ ವಿಪ್ಲವ
ದುರುಳರಟ್ಟಹಾಸ ಮೆಟ್ಟಿ ನಿಂತು
ಧರ್ಮ ರಕ್ಷಣೆಯ ನಾದ ಹೊಮ್ಮಿಸು

ಯುದ್ಧೋನ್ಮತ್ತ ಹೃದಯಗಳಿಗೆ
ರಕ್ತದೊಕುಳಿಯ ದಾಹ ಹೆಚ್ಚಿದೆ
ಮಾನವೀಯತೆಯ ರಾಗ ಹೊಮ್ಮಿಸಿ
ಪ್ರೀತಿಯ ಅರ್ಥ ಮಾಡಿಸು

ಮೇಲು ಕೇಳಿನ ದಾಳ ಉರುಳಿಸಿ
ಅಸಮಾನತೆಯಲ್ಲಿ ಸಮಾಜ ಸೋತಿದೆ
ಸಮತೆಯ ಸಂಗೀತದ ಝರಿ ಹರಿಸು
ಸಹಬಾಳ್ವೆಯ ಸೂರಡಿಯಲ್ಲಿ ನಿಲ್ಲಿಸು

ಅಧಮ ತನವು ದಮನಗೊಳ್ಳಲಿ
ಸುಮಧುರ ಬಾಂಧವ್ಯ ನೆಲೆಗೊಳ್ಳಲಿ
ಭಾವದ ಉಸಿರ ಬೆರೆಸಿ ನುಡಿಸು
ಸಂಬಂಧಗಳ ಅನುಬಂಧ ಬೆಸಿಯಲು

ರಾಧೆಯ ನೆನಪಲ್ಲಿ ಮರೆಯದಿರು
ನಮ್ಮಯ ರೋಧನೆ ಕೇಳಿಸಿಕೊಳ್ಳುತ್ತಿರು
ಕೊಳಲಲ್ಲಿ ಹೊಮ್ಮುವ ಇನಿದನಿಯು
ನಮ್ಮ ಮನದ ಕತ್ತಲೆಯ ಕಳೆಯಲಿ

ಬೇಡುವೆ ಕೃಷ್ಣ ತೆರೆಯೋ ನೀ ಕಣ್ಣ
ಬಾಳ ರಥ ಬೀದಿಯಲ್ಲಿ ಕಷ್ಟವು ತೀಕ್ಷ್ಣ
ಎಲ್ಲ ನೀಗುವುದು ನಿನ್ನ ಕೊಳಲ ಮಾಧುರ್ಯ
ಜ್ಯೋತಿ ಗೀತೆ ಬೆಳಗಲಿ ಎಲ್ಲರ ಆಂತರ್ಯ

——————————————–

ಅಮುಭಾವಜೀವಿ ಮುಸ್ಟೂರು

About The Author

1 thought on “ಅಮುಭಾವಜೀವಿ ಮುಸ್ಟೂರುಕವಿತೆ-ಕೊಳಲನೂದು ಮಾಧವ”

Leave a Reply

You cannot copy content of this page

Scroll to Top