ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಶಂಕರಾನಂದ ಹೆಬ್ಬಾಳ

ಕವಿತೆ

ಮನಸಿನ ತಮವನು ಕಳೆಯುವ ಹಣತೆ
ವಿನಯ ಹೃದಯದಿ ಹೊಳೆಯುವ ಹಣತೆ

ಲೋಕದ ದಾರಿದ್ರ್ಯವ ದೂರಮಾಡು ಇಂದೆ
ನಾಕದ ದೇವತೆಗಳನು ಸೆಳೆಯುವ ಹಣತೆ

ತೈಲದಲಿ‌ ಮುಳುಗಿದ ಬತ್ತಿಯು ಬೆಳಗುತ್ತಿದೆ
ಆಲಯದ ಕಲ್ಮಷಗಳ ತೊಳೆಯುವ ಹಣತೆ

ಸುತ್ತಲ ಅಂಧಕಾರವನು ಓಡಿಸಿತು ನೋಡು
ಅತ್ತಲಿತ್ತಲಿ ಪ್ರಭೆಯನು ಅಳೆಯುವ ಹಣತೆ

ಶುಭಗಳಿಗೆ ಅರಸುತ ನಿಂತೀತು ನಂದಾದೀಪ
ಅಭಿನವಕಾವ್ಯಕೆ ಚಿತ್ಕಳೆ ಬಳೆಯುವ ಹಣತೆ


ಶಂಕರಾನಂದ ಹೆಬ್ಬಾಳ

About The Author

1 thought on “ಶಂಕರಾನಂದ ಹೆಬ್ಬಾಳ ಕವಿತೆ”

Leave a Reply

You cannot copy content of this page

Scroll to Top