ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬಾಗೇಪಲ್ಲಿ

ಗಜಲ್

ಕ್ಷಮಾ ಗುಣಕಿಂತ ಮಿಗಿಲಾದಂತ ಸುಗುಣ ಇನ್ನೊಂದಿಲ್ಲ
ಏಸು ಹೇಳಿದಂತೆ ಕಲ್ಲೆಸೆವ ಅರ್ಹತೆ ಯಾರಿಗೂಯಿಲ್ಲ

ಅತ್ಮಹತ್ಯಾ ಬಾಂಬ್ ಸಿಡಿಸಿ ಕೊಲ್ಲಲು ಸಹಕರಿಸಿದರಂದು
ಆಪ್ತರ ಕಳೆದುಕೊಂಡವರು ಮನ್ನಿಸಿದರು ಹಗೆ ಸಾಧಿಸಲಿಲ್ಲ

ನನ್ನ ಅಜ್ಜಿಯ ಅನ್ಯಾದಿ ಹೊಡೆದು ಉರುಳಿಸಿದರು ನಿಜ
ನಾನು ಕೊಂದವರ ಮೊಮ್ಮಗನ ಮೇಲೆ ಸೇಡು ಇರಿಸಬೇಕಿಲ್ಲ

ಕೆಟ್ಟವರು ಯಾವ ಧರ್ಮೀಯರಾದರೂ ಕೆಟ್ಟವರೇ ಸರಿ
ಇಡೀ ಜನಾಂಗವನ್ನೇ ಕೆಟ್ವವರೆನುತ ಕೊಲ್ಲುವುದು ಸರಿಯಲ್ಲ

ಖಡಕ್ ನ್ಯಾಯ ತರ್ಕಶಾಸ್ತ್ರಗಳು ಬುದ್ದಿ ವಿಕಾಸಕೆ ಮಾತ್ರ
ಕ್ಷಮಾಗುಣ ಇಲ್ಲದಿರೆ ಅಲ್ಲಿ ಮಾನವತೆ ಎಂಬುದೇಯಿಲ್ಲ

ಕೃಷ್ಣಾ! ನ್ಯಾಯ ಅನ್ಯಾಯದ ವಿಶ್ಲೇಷಣೆ ಅಗತ್ಯಇರಬೇಕು
ಕಣ್ಣಿಗೆ ಕಣ್ ಎನುತ ಕುರುಡು “ವರಟು ನ್ಯಾಯ” ಬೇಕಿಲ್ಲ.


ಬಾಗೇಪಲ್ಲಿ

About The Author

Leave a Reply

You cannot copy content of this page

Scroll to Top