ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ

ಕಾಕಸ್ಪರ್ಶ

ಸ್ಮಶಾನ ಸನಿಹ ಶಿವನ ವಾಸ
ಗುಡಿಯ ಮೇಲೆ ಹೊಳೆವ ಕಳಸ
ಅದರ ಮೇಲೆ ಕುಳಿತ ಕಾಕರಾಜ

ಸುತ್ತ ಮುತ್ತ ಮತ್ತೆ ದೃಷ್ಟಿ ಹರಿಸಿ
ಸ್ವಾರ್ಥಿಜನರ ರೋದನ ಆಕ್ರಂದನ
ಕಂಡು ಪಕ್ಕ ಬಡಿದು ನಕ್ಕಿತು

ಎಲೊ ಸ್ವಾರ್ಥಿ ಮೂಢ ಮನುಜಾ
ಸಮದೃಷ್ಟಿಯ ಸ್ಮಶಾನಭೂಮಿಯ
ಸಮಾಧಾನ ಸಮಚಿತ್ತ ಕಲಿತುಕೊ

ನಿರ್ಜೀವ ದೇಹವನಪ್ಪುವ ಅಗ್ನಿ
ಮಣ್ಣಿನಲ್ಲಿ ಮಣ್ಣಾಗುವ ದೇಹಕೆ
ಜಾತ್ಯಾತೀತ ಸತ್ಯ ಸ್ಮಶಾನ ಭೂಮಿ

ಬಡವ ಬಲ್ಲಿದ ಸಂತ ಮಹಂತ
ಸಜ್ಜನ ದುರ್ಜನ ಅಬಾಲವೃದ್ಧ
ಭೇದವೆಣಿಸದ ಪುಣ್ಯಭೂಮಿ

ಅಗುಳ ಅನ್ನಕಾಗಿ ಬಂದ ನಮ್ಮನು
ಹೊಡೆದೋಡಿಸುವ ನೀನಿಂದು
ಕಾಕಸ್ಪರ್ಶಕಾಗಿ ಕಾಯುತಿರುವೆ

ನಮ್ಮನ್ನೇನು ನಿನ್ನ ಸತ್ತ ಬಳಗ
ಎಂದುಕೊಂಡೆಯಾತಿನ್ನಲುಬರಲು
ಮರ್ಯಾದಸ್ಥರು ನಾವು ತೊಲಗು

ಪರಿಸರ ಪ್ರೇಮಿಗಳು ನನ್ನ ಬಳಗ
ಅರಳಿ ಅಶ್ವತ್ಥ ಮರಗಳುನಮ್ಮಿಂದ
ಮುನ್ಸೂಚನೆ ಕೊಡುವವರುನಾವು

ಜೀವಂತವಿದ್ದಾಗ ಮರಣಯಾತನೆ
ಕೊಟ್ಟು ಕಣ್ಣೀರಿಳಿಸಿ ಕೈಬಿಟ್ಟ ನಿನ್ನ
ಪಾಪದ ಅನ್ನ ನಾ ಉಣಲಾರೆ

ಬೇಕಾದಷ್ಟು ಹಣಖರ್ಚು ಸತ್ತವರ
ಹೆಸರಲಿ ದಾನ ಧರ್ಮಾದಿ ಕ್ರಿಯಾ
ಭೂತಪ್ರೇತಾದಿ ಭಯದಿಮಾಡುವಿ

ಪಣ ತೊಟ್ಟಿರುವೆವು ನಾವಿಂದು
ಪಿಂಡಸ್ಪರ್ಶ ಮಾಡಲಾರೆವೆಂದು
ಎಷ್ಟ್ಹೊತ್ತುಕಾಯುವೆಯೊಕಾಯು


ಅನ್ನಪೂರ್ಣ ಸುಭಾಷಚಂದ್ರ

About The Author

Leave a Reply

You cannot copy content of this page

Scroll to Top