ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಕುಮಾರ

ಗೈರ್ ಮುರದಫ್ ಗಜ಼ಲ್

ಮಂಜು ಕರಗಿ ನೀರು ಬಟ್ಟಲಾಗಿದೆ ಒಣಗಲೊಲ್ಲದ ಚಕ್ಷುಗಳು
ಯಂತ್ರೋಪಕರಣಗಳ ಆರ್ಭಟಕೆ ನಲುಗಿವೆ ನೊಗಕಾಣದ ಬಂಡಿ ರಾಸುಗಳು

ಕಾರಣವ ಹುಡುಕದಾದೆ ಆಧುನಿಕತೆಯ ಲಾಸ್ಯವೋ ಪಾರಂಪರ್ಯತೆಯ ಹಾಸ್ಯವೋ
ಸ್ವಾಭಾವಿಕತೆ ನಶಿಸಿ ಕೃತಕ ಭಾವನೆಗಳ ಆಗರವಾಗಿವೆ ಕಳೆಗುಂದಿದ ಮೊಗಗಳು

ಹೃನ್ಮನಗಳು ಹುಟ್ಟಬೇಕು ನಾಡ ಸೊಗಡನ್ನು ಸೆರೆ ಹಿಡಿಯಲು
ಜಾಡು ಸಿಗದ ಹಾಗೆ ಹಬ್ಬಿವೆ ಅರ್ಥಹೀನ ಅನ್ವೇಷಣೆಗಳು

ತಳಹಿಡಿದ ಅನ್ನವಾಗಿದೆ ಬೆಂದು ಅರಳಬೇಕಾದ ಗ್ರಾಮೀಣ ವೈಶಿಷ್ಯ
ನಖ ಇಲ್ಲದ ಬಗ್ಗಗಳಾಗಿವೆ ಮೌಢ್ಯತೆಯನು ಸಹಿಸುತ್ತಿರುವ ಮಿಕಗಳು

ಕಾಲಚಕ್ರವೇ ತಿಳಿಸುವುದೇನೋ ಬದಲಾವಣೆಯ ವಕ್ರ ಪರಿಣಾಮಗಳನು ಕುಮಾರ
ಗಾಡಿಚಕ್ರ ತುಕ್ಕಿಡಿಯದ ಹಾಗೆ ಸಂಬಾಳಿಸುತ್ತಿರುವರು ಹೈರಾಣಾದ ಸುಮನಗಳು


ಸುಕುಮಾರ

About The Author

Leave a Reply

You cannot copy content of this page

Scroll to Top