ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ-

ಗಝಲ್

ಕರುಣೆಯಿರದ ಕ್ರೂರನೆಲದಲ್ಲಿ ಪಾದ ಊರಲಾರೆ ನಾನು
ಪಾರಿವಾಳವಾಗಿ ಊರಿನಲ್ಲಿ ಶಾಂತಿಯ ಸಾರಲಾರೆ ನಾನು

ಅಮಾನುಷ ಕೃತ್ಯಕ್ಕೆ ಹೃದಯ ನಡುಗಿಹೋಯಿತು ಇಂದು
ಕ್ಷುದ್ರಬುದ್ದಿಗೆ ಮಾನವೀಯ ಗುಣಗಳನು ಹೇರಲಾರೆ ನಾನು

ಹಸುಳೆಯ ಆಕ್ರಂದನ ವೃದ್ದರ ಕೂಗಿದು ಕೇಳಲೆಯಿಲ್ಲವೇ
ಬದುಕುವ ಆಸೆಯಿಂದ ಕ್ಷಮಿಸಿಬಿಡೆಂದು ಕೋರಲಾರೆ ನಾನು

ಆಕ್ರೋಶದ ಹೊಳೆಯಲ್ಲಿ ಕೊನೆಗೆ ಸಮಾಧಿ ಮಾಡುತ್ತೇನೆ
ಬಾರದೂರಿಗೆ ತೆರಳಿದ ಜೀವಗಳೊಂದಿಗೆ ಇರಲಾರೆ ನಾನು

ಕಿಚ್ಚಿನೊಳಗಿನ ಹೊನ್ನಂತೆ ಮನವು ಬೇಯುತ್ತಿದೆ ಅಭಿನವ
ಮಾರಾಟದ ಸರಕುಗಳಾಗಿ ಹೃದಯಗಳ ತರಲಾರೆ ನಾನು


ಶಂಕರಾನಂದ ಹೆಬ್ಬಾಳ

About The Author

Leave a Reply

You cannot copy content of this page

Scroll to Top