ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್

ಕಾಮವೆಂಬ ಕೂಪದಿ ಜೀವವು ಮೋಹದಲಿ
ಹೊರಳಿತಲ್ಲ
ಭ್ರಮೆಯಲಿ ತೇಲುತ ನರಕಕೆ ಏಕಾಂಗಿಯಾಗಿ
ತೆರಳಿತಲ್ಲ

ಭ್ರಮರದಂತೆ ಅಲೆದು ತೃಷೆಯ ಅರಸುತ
ನಿಂತಿತೇಕೆ
ಕಮನೀಯ ಸುಮದಂತೆ ನಲ್ಲೆಯಲಿ ಪ್ರೇಮವು
ಅರಳಿತಲ್ಲ

ಸಮವಿರದ ಒಲವಯಾನ ಕೊನೆಯಲಿ ನಿನಗೆ
ಸಿಕ್ಕಿದ್ದೇನು
ತಮದಲಿ ಸಿಲುಕಿದ ತನುವಿದು ನರಕದೊಳು
ನರಳಿತಲ್ಲ

ಕ್ರಮಕ್ರಮದಿ ಅಂತಕನ ಲೋಕದ ಸೋಪಾನ
ಏರಿದೆಯಲ್ಲ
ಅಮಲೇರಿದ ಗಜದಂತೆ ಉನ್ಮತ್ತ ಆತ್ಮವಿದು
ಉರುಳಿತಲ್ಲ

ಜಮೆಯಾಗದ ಪುಣ್ಯವ ಬಯಸೀತು ಅಭಿನವನ
ಕವಿತೆ
ಶಮನವಾಗದ ವೈಚಿತ್ರ ಮರುಜನ್ಮದ ಜೊತೆಗೆ
ಮರಳಿತಲ್ಲ


ಶಂಕರಾನಂದ ಹೆಬ್ಬಾಳ

About The Author

Leave a Reply

You cannot copy content of this page

Scroll to Top