ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ ಕವಿತೆ

ನಾವು ಮನುಜರು

ಮೈಗೆ ಅಂಟಿದ ಚರ್ಮಕ್ಕೆ
ಅದಾವ ಜಾತಿ
 ನರಮಾನವರ ಜನನ ಮೂಲಕೆ ಅದಾವ ಜಾತಿ
ಹರಳಯ್ಯ ಕಲ್ಯಾಣ ಮ್ಮರ
 ಪವಿತ್ರ ಪಾದುಕೆ
ಹೊತ್ತು ಕುಣಿದಾಡಿದ
ಅಣ್ಣ ಬಸವಣ್ಣ
ಮತ್ತಾರು ಇಲ್ಲ ಜಗದಲಿ
ದ್ವೇಷ ಮತ್ಸರದ ಸುಡಗಾಡ ಕೇರಿಯಲಿ
ಯಾವ ಜಾತಿ
ಮಣ್ಣು ಸೇರುವ ಎಲುಬು
ಕಿತ್ತು ತಿನ್ನುವ ಮನುಜ
 ಜಾತಿ ಸುಟ್ಟು ವಗೆದ
 ಅಣ್ಣ ಬಸವ ತಂದೆ
 ಇನ್ನೂ ಹೋಗಿಲ್ಲ ಬಾರೋ
ಹೆಕ್ಕಿ ಮುಕ್ಕಿ ಬಡಿಯುವರು
ನಾಲಿಗೆಯಲಿ
 ಇಲ್ಲ ಪರಿಶುದ್ಧತೆ
ಭೇದ ಅಳಿಸಿ ನಗಿಸಿ
 ಕುಣಿಸಿದೆ ಅಂದು
ಇಂದು ಮುಗಿಲು ಮುಟ್ಟಿದೆ
ನಮ್ಮ ಧರ್ಮ ನಿಮ್ಮ ಧರ್ಮ ನೋಡುತ್ತ ಕುಳಿತ ಅಣ್ಣ ನಗುತ್ತಿರುವನು
ಹುಸಿ ನಗೆಯ ಬೀರಿ
ಅಳಿಸಲು ಬಾರೋ ಅಣ್ಣ
 ನಾವು ಮನುಜರು
ಬಸವ ನಾಡಿನ ಮಕ್ಕಳು
 ಅರಿವು ಆಚಾರ ಕಲಿತವರು ಬಾರೋ ಬಸವ
ಭೇದ ಅಳಿಸಿ ನಗಿಸಿ
———————————

ಡಾ ಸಾವಿತ್ರಿ ಕಮಲಾಪೂರ

About The Author

Leave a Reply

You cannot copy content of this page

Scroll to Top