ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ ಕವಿತೆ

ಮೌನವಾದ ಬುದ್ಧ

ಅವಳೆದಯ ನೋವೆಲ್ಲಾ
ಪಾಚಿಗಟ್ಟಿದೆ ಕಲ್ಲು ಬಂಡೆ
ಮೌನದಲಿ ನಿಂತ ಬುದ್ಧನಂತೆ
ಕಂಡ ದೃಶ್ಯ ಚೆನ್ನ ಒಲವ ಸ್ನೇಹ
ಮುಪ್ಪು ರೋಗ ಶವ ಸನ್ಯಾಸ

ಒಳಗೆ ಕೊರೆದ ಪ್ರಶ್ನೆಗಳಿಗೆ ಎದ್ದ
ಜಗವ ಬೆಳಗಲು ಧರೆ ಗೆದ್ದ
ಅದೆಷ್ಷು ತಗ್ಗು ದಿನ್ನೆಗಳಲಿ ಬಿದ್ದ
ಆಸೆಯೇ ದುಃಖಕ್ಕೆ ಕಾರಣವೆಂದ

ಮಡಿಲ ಕಂದನ ತೊರೆದು
ತೊಡರು ಬದುಕಿಗೆಂದು
ಮೋಹ ಮಡದಿ ದೂಡಿ
ಮಮತೆಯಲಿ ಜಗವ ನೆಚ್ಚಿದ

ಮನದ ಕರಿಯ ನೆರಳು
ವಿಷದ ಮಾತುಗಳ ಮುಳ್ಳು
ತವಕದಿ ದೇವ ಹುಡುಕುತ
ದುಃಖ ಮರೆಸಲು ಮೌನವಾದ

*****

ಡಾ ಸಾವಿತ್ರಿ ಕಮಲಾಪೂರ

About The Author

Leave a Reply

You cannot copy content of this page

Scroll to Top