ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಹಮೀದಾ ಬೇಗಂ ದೇಸಾಯಿ

ಗಜ಼ಲ್

ಜಗದ ಸುಡುನೆತ್ತಿಗೆ ನೆರಳು ಬೇಕಾಗಿದೆ ಖುದಾ
ಕಂಗೆಟ್ಟ ಬದುಕಿಗೆ ಜೀವ ಸಾಕಾಗಿದೆ ಖುದಾ

ವಂಚಕ ತೋಳಗಳು ಗಿರಕಿ ಹೊಡೆಯುತಿವೆ ಅಲ್ಲವೇ
ಕಪಟ ಕಾರಸ್ಥಾನ ಎಲ್ಲೆಡೆ ಚುರುಕಾಗಿದೆ ಖುದಾ

ಹಾಲುಗಲ್ಲದ ಹಸುಳೆಗಳು ಭಯದಿ ನಡುಗಿವೆ ಇದ್ದಲ್ಲೇ
ವೇಷಧಾರಿ ಕಾಮುಕರ ನೀತಿಯಲಿ ಬಿರುಕಾಗಿದೆ ಖುದಾ

ಹಗಲೂ ನಾಚಿ ಮರೆಯಾಗಿದೆ ಮೋಡಗಳ ನಡುವೆ
ಪಿಶಾಚಿಗಳ ಬೆತ್ತಲೆ ಕುಣಿತ ಕುತ್ತಾಗಿದೆ ಖುದಾ

ಏನು ಹೇಳಿಯಾಳು ಬೇಗಂ ಉಡುಗಿದ ದನಿಯಲಿ
ಬಿರಿದೆದೆ ಸುರಿಸಿದ ಕಣ್ಣೀರು ತುತ್ತಾಗಿದೆ ಖುದಾ

ಹಮೀದಾ ಬೇಗಂ ದೇಸಾಯಿ

About The Author

Leave a Reply

You cannot copy content of this page

Scroll to Top