ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಲೋಚನಾ ಮಾಲಿಪಾಟೀಲ

ಮತ್ತೆ ಹುಟ್ಟಿ ಬನ್ನಿ

ಆಧುನಿಕ ಜೀವನದ ನಡೆಯಲ್ಲಿ
ಮತ್ತೆ ಅದೇ ಧುಳೆಬ್ಬಿಸಿ ಕುಣಿವಲ್ಲಿ
ನಮ್ಮ ಸಂಸ್ಕೃತಿಯ ಮರೆಮಾಚುತ
ಕಾರ್ಗತ್ತಲಿನ ಮಡುವು ಹರಿಡಿಸಿಹಿರಿಲ್ಲಿ

ಅಷ್ಟಮದಂಗಳು ಕೆಕೆ ಹಾಕುವ ಲೋಕ
ಯಾರಿಗೆ ಬೇಕಾಗಿದೆ ಇಂತಹ ನರಕ
ಮೂರ್ಖರ ದುರಾಡಳಿತ ನಡೆಯಲ್ಲಿ
ಇದ್ದು ಸತ್ತಂತಿರುವ ಮನುಜನ ಬದುಕ

ಮತ್ತೆ ಹುಟ್ಟಿ ಬನ್ನಿ ಮಹಾತ್ಮರೆ
ಜಗದ ವಿಷವ ತೊಳೆಯುವ ಕರೆ
ಬುದ್ಧ ಬಸವ ದಾಸ ಸಂತರನ್ನು
ಮರಳಿ ಕಾಣಲು ಸಾಧ್ಯ ಮನುಜರೆ

ಹುಡುಕಿ ನಿಮ್ಮ ಅಂತರಾತ್ಮದಲಿ
ನೆನೆಯಿರಿ ನಿಮ್ಮ ಪ್ರತಿ ಉಸಿರಿನಲಿ
ಆ ಪುಣ್ಯಕುಲದ ಮಹಾಂತರನ್ನು
ನೆಮ್ಮದಿಯ ಜೀವನ ಕರುಣಿಸಿದವರಿಲ್ಲಿ


ಸುಲೋಚನಾ ಮಾಲಿಪಾಟೀಲ.

About The Author

Leave a Reply

You cannot copy content of this page

Scroll to Top