ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮನ್ಸೂರ್ ಮುಲ್ಕಿಯವರ

ಅರಿವು

ಮನವು ತನನಕೆ ತನುವು ಮನನಕೆ
ಓದು ಅರಿವಿಗೆ ಅರಿವು ಬದುಕಿಗೆ
ಹೊಸ ಗಿಡದಲಿ ಮೊಗ್ಗು ಅರಳಿದೆ
ಬಾವ ಕೂಡಿ ಮಾತು ಮೂಡಿದೆ.

ಅದಿರು ಕಣದಲಿ ಬೆಳಕು ಹರಿದಿದೆ
ಉಸಿರು ಸೆಳೆಯಲು ಗಾಳಿ ಬೇಕಿದೆ
ಬಾನು ಕೆಂಪೇರಿ ಮೋಡ ಕವಿದಿದೆ
ಮಳೆ ಸುರಿಯಲು ಫಲವು ಸಿಗಬೇಕಿದೆ

ಉಂಡ ಅನ್ನದಲ್ಲಿ ಕಂಡ ಸಿಹಿಯೊಳು
ಬೆಳಗುತಿಹುದು ಬದುಕಿನ ಕಿಂಡೀ..
ರೈತನೊಳಗಿನ ನೋವ ತಿಳಿಯದೆ
ಬದುಕನು ನೀ ಹೇಗೆ ಕಂಡೀ..

ಪ್ರೀತಿಯಲಿ ನಡೆಯುತ ಅಹಂ ಚೆಲ್ಲಿ
ಮಾತಿನಲ್ಲಿ ವೀಣೆಯನ್ನೇ ನುಡಿಸಿಬಿಡು
ಬೆದರಿಕೆ ಗದರಿಕೆ ನಂಜು ಅಳಿಸಿ
ಸ್ವಾದ ಇರುವ ಬದುಕಿನಲ್ಲಿ ಸಿಟ್ಟು ಬಿಟ್ಟುಬಿಡು.


ಮನ್ಸೂರ್ ಮುಲ್ಕಿ

About The Author

Leave a Reply

You cannot copy content of this page

Scroll to Top